ರಜಿನಿಕಾಂತ್ ರಾಜಕೀಯಕ್ಕೆ.. ಶೀಘ್ರವೇ ಹೊಸ ಪಕ್ಷ ಘೋಷಣೆ

ಶುಕ್ರವಾರ, 10 ಫೆಬ್ರವರಿ 2017 (16:49 IST)
ತಮಿಳುನಾಡಿನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿರುವ  ಈ ಸಂದರ್ಭದಲ್ಲೇ ಸೂಪರ್ ಸ್ಟಾರ್ ರಜಿನಿಕಾಂತ್ ರಾಜಕೀಯ ಪ್ರವೇಶಕ್ಕೆ  ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತವೆ. ಶೀಘ್ರದಲ್ಲೆ ರಜಿನಿಕಾಂತ್ ಹೊಸ ಪಕ್ಷ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
 
ಈ ಮಧ್ಯೆ, ರಜಿನಿಕಾಂತ್ ಅವರನ್ನ ಭೇಟಿ ಮಾಡಿರುವ ರೆಸ್ಸೆಸ್ ಮುಖಂಡ ಸ್. ಗುರುಮೂರ್ತಿ, ಬಿಜೆಪಿ ಸೇರುವಂತೆ ಮನವಿ ಮಾಡಿದ್ದಾರೆ.

ಇತ್ತ, ರಜಿನಿಕಾಂತ್ ರಾಜಕೀಯಕ್ಕೆ ಸೇರುತ್ತಾರೆಂಬ ಸುದ್ದಿ ಕಿವಿಗೆ ಬೀಳುತ್ತಲೇ ವಿಚಲಿತರಾಗಿರುವ ಬಿಗ್ ಬಿ ಅಮಿತಾಬ್ ಬಚ್ಚನ್, ಯಾವುದೇ ಕಾರಣಕ್ಕೂ ಆ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ