ಕೊಲೆ ಮಾಡಿ ರುಂಡ ತೆಗೆದುಕೊಂಡು ಹೋದ ದರೋಡೆಕೋರರು!

ಶುಕ್ರವಾರ, 18 ಫೆಬ್ರವರಿ 2022 (09:31 IST)
ಚೆನ್ನೈ: ದರೋಡೆ ಮಾಡುವಾಗ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಓರ್ವನನ್ನು ಕೊಲೆ ಮಾಡಿರುವ ಆರೋಪಿಗಳು ಆತನ ರುಂಡದ ಜೊತೆಗೆ ಪರಾರಿಯಾದ ಭೀಕರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಸತೀಶ್ ಮತ್ತು ರಂಜಿತ್ ಎಂಬಿಬ್ಬರು ಸ್ನೇಹಿತರು ತಮ್ಮ ಮನೆಯ ಸಮೀಪ ಖಾಲಿ ಜಾಗದಲ್ಲಿ ರಾತ್ರಿ ವೇಳೆ ಮದ್ಯಪಾನ ಮಾಡುತ್ತಾ ಹರಟುತ್ತಾ ಕೂತಿದ್ದರು. ಈ ವೇಳೆ ನಾಲ್ಕು ಬೈಕ್ ಗಳಲ್ಲಿ ಬಂದ ದರೋಡೆಕೋರರು ಅವರಿಂದ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸತೀಶ್ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಆತನ ರುಂಡ ಕತ್ತರಿಸಿದ್ದಾರೆ. ಬಳಿಕ ರುಂಡದ ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆ.

ಆದರೆ ರಂಜಿತ್ ಅವರಿಂದ ಹೇಗೋ ತಪ್ಪಿಸಿಕೊಂಡು ಮುಖ್ಯರಸ್ತೆಗೆ ಬಂದು ಸ್ಥಳೀಯರ ನೆರವು ಕೇಳಿದ್ದಾನೆ. ಇದೀಗ ರಂಜಿತ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ದರೋಡೆಕೋರರು ಮತ್ತು ಅವರು ಜೊತೆಗೆ ಒಯ್ದಿದ್ದ ರುಂಡಕ್ಕಾಗಿ ಹುಡುಕಾಟ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ