ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ, ಆರ್ಎಸ್ಎಸ್, ಸಂಘ ಪ್ರಚಾರಕ ಇಂದ್ರೇಶ್ ಕುಮಾರ್ ಮತ್ತು ಮುಸ್ಲಿಂ ರಾಷ್ಟ್ರೀಯ ಮಂಚ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ವಿಶೇಷವೆಂದರೆ ಪಾಕಿಸ್ತಾನಕ್ಕೂ ಕೂಡ ಆಮಂತ್ರಣವನ್ನು ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕುಮಾರ್, ಮುಸ್ಲಿಂ ರಾಷ್ಟ್ರೀಯ ಮಂಚ್ ಈ ಮೆಗಾ ಅಂತರಾಷ್ಟ್ರೀಯ ಇಫ್ತಾರ್ ಕೂಟವನ್ನು ಆಯೋಜಿಸಿದೆ. ವಿಶ್ವದೆಲ್ಲೆಡೆಯಿಂದ ಮುಸ್ಲಿಂ ಪಂಡಿತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಸ್ಲಿಂ ರಾಷ್ಟ್ರವಷ್ಟೇ ಅಲ್ಲದೇ ಮುಸ್ಲಿಮೇತರ ರಾಷ್ಟ್ರದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಉದ್ದೇಶ ಭಾರತೀಯತೆ ಮತ್ತು ಭಾರತೀಯ ಸಂಸ್ಕೃತಿ ಎಂಬುದು ಒಂದು ಕೊಡೆ, ಅದರಡಿಯಲ್ಲಿ ಎಲ್ಲ ರಾಷ್ಟ್ರೀಯತೆಯವರು ಮತ್ತು ಧರ್ಮದವರು ಸಮಾನ ಹಕ್ಕುಗಳನ್ನು ಮತ್ತು ಘನತೆಯನ್ನು ಹೊಂದಿದ್ದಾರೆ. ಜತೆಗೆ ಭಾರತ 'ವಿಶ್ವಶಾಂತಿಯ ಪ್ರತೀಕ; ಎಂದು ತೋರಿಸುವುದು ಎಂದು ಹೇಳಿದ್ದಾರೆ.
ಭಾರತ ಮುಸ್ಲಿಂ ಜಗತ್ತಿಗೆ ಭರವಸೆಯ ಮತ್ತು ಶಾಂತಿಯ ಆಶಾಕಿರಣ ಎಂದಿದ್ದಾರೆ.
ಇದು ಮುಸ್ಲಿಮರು ಮುಸ್ಲಿಂ ಸಮುದಾಯಕ್ಕಾಗಿ ಆಯೋಜಿಸಿರುವ ಕಾರ್ಯಕ್ರಮ. ಸಂಘ ಇಫ್ತಾರ್ನ್ನು ಆಯೋಜಿಸುತ್ತಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.