ಪ್ರಧಾನಿ ಮೋದಿ ದಿಢೀರನೆ 500 ಮತ್ತು 1,000 ಮುಖಬೆಲೆ ನೋಟುಗಳನ್ನು ನಿಷೇಧಗೊಳಿಸಿರುವುದು ದೇಶಾದ್ಯಂತ ಸಾಮಾನ್ಯ ಜನಜೀವನದ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಹಣ ವಿನಿಮಯ ಮಾಡಿಕೊಳ್ಳಲು ಜನರು ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಈ ನಡೆಯ ಪರಿಣಾಮ ಜನರು ವಿಭಿನ್ನ ಸಂಕಷ್ಟಗಳನ್ನು ಎದುರಿಸುತ್ತಿದ್ದು ಉತ್ತರ ಪ್ರದೇಶದಲ್ಲಿ ಉಪ್ಪಿನ ಬೆಲೆ ಗಗನಕ್ಕೆ ಏರಿದೆ ಎಂಬ ವದಂತಿ ಹರಡಿ 20 ರೂಪಾಯಿ ಉಪ್ಪು 400 ರೂಪಾಯಿಗೆ ಏರಿಕೆಯಾಗಿದ್ದು ಜನಸಾಮಾನ್ಯರು ಪರದಾಡುತ್ತಿದ್ದಾರೆ.