ತಮಿಳುನಾಡಿನಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡಿದ ಶಶಿಕಲಾ ಸೋದರ ಸಂಬಂಧಿ ವಿ. ದಿವಾಕರನ್

ಸೋಮವಾರ, 11 ಜೂನ್ 2018 (13:15 IST)
ಚೆನ್ನೈ : ಎಐಎಡಿಎಂಕೆ ಉಚ್ಚಾಟಿತ ನಾಯಕಿ. ಶಶಿಕಲಾ ಅವರ ಸೋದರ ಸಂಬಂಧಿ ವಿ. ದಿವಾಕರನ್ ಅವರು ಭಾನುವಾರ ‘ಅಣ್ಣಾ ದ್ರಾವಿಡರ್ ಕಳಗಂ’ ಎಂಬ ಹೊಸ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ.


ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ನಿಧನದ ನಂತರ ವಿ.ಕೆ. ಶಶಿಕಲಾ ಹಾಗು ಸೋದರ ಸಂಬಂಧಿ ಟಿಟಿವಿ ದಿನಕರನ್ ಅವರು ಚೆನ್ನೈ ನ ಆರ್. ಕೆ. ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ವೇಳೆ ‘ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ’ ಎಂಬ ಹೊಸ ಪಕ್ಷವನ್ನು  ಸ್ಥಾಪಿಸಿದ್ದರು.


ಇದೀಗ ಶಶಿಕಲಾ ಅವರ ಕುಟುಂಬದಿಂದ ದೂರ ಉಳಿದಿರುವ ಸಹೋದರ ವಿ. ದಿವಾಕರನ್ ಈಗ ದಿನಕರನ್ ಅವರ ವಿರುದ್ಧ ರಾಜಕೀಯವಾಗಿ ಹೋರಾಟ  ನಡೆಸಲು ಅಣ್ಣಾ ದ್ರಾವಿಡರ್ ಕಳಗಂ ಎಂಬ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಅವರೇ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಲಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಹಾಗೂ ಹೋರಾಟದ ರೂಪರೇಷೆ ಸಿದ್ದಪಡಿಸುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ