ಲಾಲ್ ಪರೇಡ್ ಮೈದಾನದಲ್ಲಿ ನಡೆದ ಯೋಗ ದಿನದ ಕಾರ್ಯಕ್ರಮದಲ್ಲಿ ಅಪಾರ ಜನಸಮೂಹವನ್ನುದ್ದೇಶಿಸಿ ಮಾತನ್ನಾಡಿದ ಅವರು ,"ಪ್ರಾಚೀನ ಭಾರತ ಮತ್ತು ಆಧುನಿಕ ಯುಗದ ನಡುವೆ ಸೇತುವೆಯಾಗಿ ಈ ದಿನ ಕೆಲಸ ಮಾಡುತ್ತದೆ", ಎಂದರು.
ಕಾಲು ಮುರಿದಿದ್ದರೂ ಸಹ ರಾಜ್ಯ ಗೃಹ ಸಚಿವ ಬಾಬುಲಾಲ್ ಗೌರ್ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಾತನ್ನಾಡಿದ ಅವರು, "ನಾನು ಪ್ರತಿದಿನ ಭಗವದ್ಗೀತೆಯನ್ನು ಓದುತ್ತೇನೆ ಮತ್ತು ಯೋಗಾ ಮಾಡುತ್ತೇನೆ. ಇವೆರಡು ನನ್ನ ದಿನನಿತ್ಯದ ಅಭ್ಯಾಸಗಳು", ಎಂದರು.