ಡಾ.ಕಲಾಂ ಪುಣ್ಯತಿಥಿ ಸಮಾರಂಭದಲ್ಲಿ ಗೌರವ ಸಲ್ಲಿಸಿದ ಸೋನಿಯಾ ಗಾಂಧಿ

ಬುಧವಾರ, 27 ಜುಲೈ 2016 (17:13 IST)
ಮಾಜಿ ರಾಷ್ಟ್ರಪತಿ ದಿವಂಗತ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಮೊದಲ ವರ್ಷದ ಪುಣ್ಯತಿಥಿ ಆಚರಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಕಲಾಂಗೆ ಗೌರವ ಸಲ್ಲಿಸಿ ಅವರೊಬ್ಬ ಮಹಾ ಮಾನವತಾವಾದಿ ಎಂದು ಬಣ್ಣಿಸಿದ್ದಾರೆ. 
 
ಡಾ.ಕಲಾಂ ಮಹಾ ಮಾನವತಾವಾದಿ, ಖ್ಯಾತ ವಿಜ್ಞಾನಿ ಮತ್ತು ಅತ್ಯುತ್ತಮ ಶಿಕ್ಷಕರಾಗಿದ್ದರು. ಭಾರತ ದೇಶಕ್ಕೆ ಅವರು ನೀಡಿದ ಕೊಡುಗೆ ಅಪಾರ. ರಾಷ್ಟ್ರಪತಿ ಭವನ ಮತ್ತು ಸಾಮಾನ್ಯ ನಾಗರಿಕರ ಮಧ್ಯದ ಸೇತುವೆಯನ್ನು ಅಳಿಸಿಹಾಕಿದ್ದರು ಎಂದು ತಿಳಿಸಿದ್ದಾರೆ. 
 
ಡಾ,ಕಲಾಂ ಸರಳ ಸಜ್ಜನ ಜೀವಿಯಾಗಿದ್ದರು. ಅವರು ತಮ್ಮ ಕರ್ತವ್ಯ ನಿಷ್ಠೆಯಿಂದ ಉನ್ನತ ಸ್ಥಾನಕ್ಕೇರಿ ಇತರರಿಗೆ ಮಾದರಿಯಾಗಿದ್ದರು. ಅಂತಹ ಸರಳ ಸಜ್ಜನ ರಾಷ್ಟ್ರಪತಿಯಾಗಿ ದೊರಕುವುದು ಅಪರೂಪ ಎಂದು ಹೊಗಳಿದರು. 
 
ಶಿಲ್ಲಾಂಗ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಡಾ. ಅಬ್ದುಲ್ ಕಲಾಂ ಭಾಷಣ ಮಾಡುತ್ತಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದರು.   

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ