ರಜನೀಕಾಂತ್ ಅನಕ್ಷರಸ್ಥ ಎಂದ ಸುಬ್ರಮಣಿಯನ್ ಸ್ವಾಮಿ

ಭಾನುವಾರ, 31 ಡಿಸೆಂಬರ್ 2017 (11:51 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಹೊಸ ರಾಜಕೀಯ ಪಕ್ಷ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
 

ರಜನೀಕಾಂತ್ ಅನಕ್ಷರಸ್ಥ, ರಾಜಕೀಯ ಪಕ್ಷದ ಘೋಷಣೆಯೆಲ್ಲಾ ಮೀಡಿಯಾ ಗಿಮಿಕ್ ಎಂದು ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ. ಹಿಂದೆ ರಜನಿ ರಾಜಕೀಯಕ್ಕೆ ಬರುವುದಾಗಿ ಹೇಳಿದ್ದಾಗಲೂ ಸುಬ್ರಮಣಿಯನ್ ಸ್ವಾಮಿ ನಿಮ್ಮಂಥವರಿಗಲ್ಲ ರಾಜಕೀಯ ಎಂದಿದ್ದರು.

‘ರಜನಿ ಒಬ್ಬರೇ ರಾಜಕೀಯ ಪಕ್ಷ ಸ್ಥಾಪಿಸುತ್ತಿರುವುದಾಗಿ ಘೋಷಣೆ ಮಾಡಿಕೊಂಡರು. ವಿವರ ನೀಡಿಲ್ಲ, ದಾಖಲೆಯನ್ನೂ ನೀಡಿಲ್ಲ. ಇದೆಲ್ಲಾ ಪ್ರಚಾರ ತಂತ್ರವಷ್ಟೇ’ ಎಂದು ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ