ಸುನಂದಾ ಪುಷ್ಕರ್ ಸಾವಿನ ರಹಸ್ಯ ಶೀಘ್ರ ಬಹಿರಂಗ..?

ಶುಕ್ರವಾರ, 21 ಜುಲೈ 2017 (17:45 IST)
ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢವಾಗಿ ನವದೆಹಲಿ ಹೋಟೆಲ್`ನಲ್ಲಿ ಹತ್ಯೆಗೀಡಾಗಿ 3 ವರ್ಷಗಳೇ ಕಳೆದಿವೆ. ಆದರೆ, ಆಕೆಯ ಸಾವೊಇನ ರಹಸ್ಯ ಭೇದಿಸಲು ಇದುವರೆಗೂ ವೈದ್ಯರಿಗೆ ಸಾಧ್ಯವಾಗಿಲ್ಲ.

ಮರಣೋತ್ತರ ಪರೀಕ್ಷೆ ನಡೆಸಿದ್ದ ಏಮ್ಸ್ ವೈದ್ಯರು  ಎಫ್`ಬಿಐ ಲ್ಯಾಬ್`ಗೂ ದತ್ತಾಂಶ ಕಳುಹಿಸಿದ್ದರು. ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ವಿಸ್ತ್ಋತ ವೈದ್ಯಕೀಯ ಸಮಿತಿ ರಚಿಸಿದ್ದರೂ ಸಾವಿನ ರಹಸ್ಯ ಬಯಲಿಗೆ ಬಂದಿಲ್ಲ. ಕೊನೆಗೂ ಈ ರಹಸ್ಯ ಭೇದಿಸಲು ಮುಂದಾಗಿರುವ ವಿಸ್ತೃತ ವೈದ್ಯಕೀಯ ಸಮಿತಿ ಮಹತ್ವದ ಸಭೆ ನಡೆಸಲು ನಿರ್ಧರಿಸಿದೆ.

ಸುನಂದಾ ಸಾವಿನ ಬಗ್ಗೆ ಏಮ್ಸ್ ವೈದ್ಯರು ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪುತ್ರ ಶಿವ್ ಮೆನನ್, ದೆಹಲಿಯ ಪೊಲೀಸ್ ಆಯುಕ್ತ ಬಿಎಸ್. ಬಸ್ರಾಗೆ ಪತ್ರ ಬರೆದು, ಏಮ್ಸ್ ವೈದ್ಯರು ಸಾವಿನ ಬಗ್ಗೆ ಖಚಿತತೆ ನೀಡದಿದ್ದಾಗ ಬೇರೆ ವೈದ್ಯರನ್ನ ಸಂಪರ್ಕಿಸಲಿಲ್ಲವೇಕೆ..? ವಿಸ್ತೃತ ವೈದ್ಯಕೀಯ ಸಮಿತಿ ರಚಿಸಿದ್ದರೂ ಸುಮ್ಮನಾಗಿದ್ದೇಕೆ ಎಂದು ಪ್ರಶ್ನಿಸಿದ್ದರು.

ಅಲ್ಫ್ರಾಜೋಲಮ್ ಓವರ್ ಡೋಸ್`ನಿಂದ ಸುನಂದಾ ಸಾವು ಸಂಭವಿಸಿರಬಹುದು ಎಂದು ಏಮ್ಸ್ ವೈದ್ಯರ ಸಂಶಯ, ಎಫ್`ಬಿಐ ಲ್ಯಾಬ್ ವರದಿ ಎಲ್ಲವನ್ನೂ ಪಡೆಯುತ್ತಿರುವ ವಿಸ್ತೃತ ವೈದ್ಯಕೀಯ ಸಮಿತಿ ಅಂತಿಮ ನಿರ್ಧಾರಕ್ಕೆ ಬರುವ ಪ್ರಯತ್ನ ನಡೆಸುತ್ತಿದೆ.ವೈದ್ಯರು ಸಾವಿನ ಬಗ್ಗೆ ಸ್ಪಷ್ಟ ವರದಿ ನೀಡಿದ ಬಳಿಕ ತನಿಖೆಯ ಹಾದಿ ಸುಗಮವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ