ಫೋನ್ ನಲ್ಲಿ ಕಿತ್ತಾಡಿದ ಮರುಕ್ಷಣವೇ ಗುಂಡೇಟಿಗೆ ಬಲಿಯಾದ!

ಸೋಮವಾರ, 8 ಅಕ್ಟೋಬರ್ 2018 (09:45 IST)
ನವದೆಹಲಿ: ಸಹೋದರಿ ಜತೆಗೆ ಫೋನ್ ನಲ್ಲಿ ಕಿತ್ತಾಡಿ ಮನೆಯಿಂದ ಹೊರ ಬಂದ ತಕ್ಷಣ ಯುವಕನೊಬ್ಬ ಗುಂಡೇಟಿಗ ಬಲಿಯಾದ ಘಟನೆ ಬಿಂದಾಪುರ್ ನಲ್ಲಿ ನಡೆದಿದೆ.

17 ವರ್ಷದ ಯುವಕ ಭಾನುವಾರ ಬೆಳ್ಳಂ ಬೆಳಿಗ್ಗೆ ಸಹೋದರಿ ಜತೆ ಫೋನ್ ನಲ್ಲಿ ವಾಗ್ವಾದ ನಡೆಸುತ್ತಿದ್ದ. ಅದಾದ ಬಳಿಕ ಆತ ಮನೆಯಿಂದ ಹೊರ ಹೊರಟ ತಕ್ಷಣ ಗುಂಡೇಟಿಗೆ ತೀವ್ರ ಗಾಯಗೊಂಡಿದ್ದಾನೆ.

ಈತನಿಗೆ ಗುಂಡೇಟು ನೀಡಿದವರು ಯಾರು ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದರ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ. ಮೃತನ ಬಟ್ಟೆಯಲ್ಲಿ ಗುಂಡುಗಳು ಪತ್ತೆಯಾಗಿರುವುದರಿಂದ ಪೊಲೀಸರಿಗೆ ಈ ಪ್ರಕರಣ ಮತ್ತಷ್ಟು ಕಗ್ಗಂಟಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ