ಬೆಂಗಳೂರು: ರಾಧಿಕಾ ಯಾದವ್ ಹತ್ಯೆಯು "ಮುಕ್ತ ಮತ್ತು ಮುಚ್ಚಿದ" ಪ್ರಕರಣವಾಗಿದೆ ಎಂದು ಗುರುಗ್ರಾಮ್ ಪೊಲೀಸರು ಭಾನುವಾರ ತಿಳಿಸಿದ್ದಾರೆ. ದೇಶವನ್ನೇ ಬೆಚ್ಚಿಬೀಳಿಸಿದ ತಂದೆಯಿಂದಲೇ ಹತ್ಯೆಯಾದ ರಾಧಿಕಾ ಯಾದವ್ ತನಿಖೆಯನ್ನು ಪೊಲೀಸರು ಮುಕ್ತಾಯಗೊಳಿಸಿದ್ದಾರೆ.
ಇದೀಗ ಆಕೆಯ ಸ್ನೇಹಿತರು ಾನ್ಲೈನ್ನಲ್ಲಿ ಪೋಸ್ಟ್ , ವಿಡಿಯೋ ಹಂಚಿಕೊಂಡು ತಮ್ಮ ಸ್ನೇಹಿತೆ ತನ್ನ ಮನೆಯಲ್ಲಿ ಅನುಭವಿಸಿದ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಯಾರೊಬ್ಬರ ಹೇಳಿಕೆಗಳನ್ನು ಚಾರ್ಜ್ಶೀಟ್ಗೆ ಸೇರಿಸುತ್ತಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಫೋರೆನ್ಸಿಕ್ ಮತ್ತು ಸಾಕ್ಷ್ಯದ ಆಧಾರದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.