ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನಲೆ; ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ಟ್ವೀಟ್

ಸೋಮವಾರ, 16 ಡಿಸೆಂಬರ್ 2019 (11:30 IST)
ನವದೆಹಲಿ : ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಟ್ವೀಟ್ ಮೂಲಕ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.



ಯುವಕರು ಮತ್ತು ಅವರ ಧೈರ್ಯವನ್ನು ನಿಗ್ರಹಿಸಲು ಯತ್ನಿಸಲಾಗುತ್ತಿದೆ. ಕೇಳಿ ಮೋದಿಯವರೇ , ಇವರು ನಮ್ಮ ದೇಶದ ಯುವಕರು. ಇವರ ಧ್ವನಿಯನ್ನು ಇಂದಲ್ಲಾ ನಾಳೆಯಾದರೂ ಕೇಳಲೇಬೇಕು ಎಂದು ಪ್ರಿಯಾಂಕ ಗಾಂಧಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.


ವಿವಿಗಳಿಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಜನರ ಧ್ವನಿ ಆಲಿಸಬೇಕಾದ ಸಮಯದಲ್ಲಿ ಇದೆಲ್ಲಾ ನಡೀತಿದೆ. ಈಶಾನ್ಯ ಭಾರತ, ಉತ್ತರ ಪ್ರದೇಶ, ದೆಹಲಿಯಲ್ಲಿ ಸ್ಟೂಡೆಂಟ್ಸ್ , ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ