ಚಹಾಗೆ ಸಕ್ಕರೆ ಹಾಕಿಲ್ಲ ಎಂದು ಹೋಟೆಲ್ ಮಾಲೀಕನಿಗೆ ಇರಿತ

ಶುಕ್ರವಾರ, 6 ಜನವರಿ 2023 (11:03 IST)
ತಿರುವನಂತಪುರಂ : ಚಹಾಕ್ಕೆ ಸಕ್ಕರೆ ಹಾಕಿಲ್ಲ ಎಂದು ವ್ಯಕ್ತಿಯೊಬ್ಬ ಹೋಟೆಲ್ ಮಾಲೀಕನಿಗೆ ಚಾಕು ಇರಿದ ಘಟನೆ ಕೇರಳದ ಮಲಪ್ಪುರಂನ ತಾನೂರ್ನಲ್ಲಿ ನಡೆದಿದೆ.

ಆರೋಪಿಯನ್ನು ಸುಬೈರ್ ಎಂದು ಗುರುತಿಸಲಾಗಿದ್ದು, ಈತ ತನೂರಿನ ಟಿಎ ಹೋಟೆಲ್ಗೆ ಚಹಾ ಕುಡಿಯಲು ಹೋಗಿದ್ದ. ಈ ವೇಳೆ ಹೋಟೆಲ್ ಸಿಬ್ಬಂದಿ ನೀಡಿದ್ದ ಚಹಾದಲ್ಲಿ ಸಕ್ಕರೆ ಸ್ವಲ್ಪ ಕಡಿಮೆ ಇತ್ತು.

ಇದರಿಂದಾಗಿ ಸುಬೈರ್ ಹೋಟೆಲ್ ಮಾಲೀಕ ಮನಾಫ್ನೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಮನಾಫ್ಗೆ ಸುಬೈರ್ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. 

ತಕ್ಷಣ ಅಲ್ಲಿದ್ದ ಸಿಬ್ಬಂದಿ ಮನಾಫ್ನನ್ನು ಕೊಯಿಕ್ಕೋಡ್ನಲ್ಲಿರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಮನಾಫ್ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ