ಅಭಿನಂದನ್ ವರ್ಧಮಾನ್‌ರನ್ನು ಸೆರೆಹಿಡಿದಿದ್ದ ಪಾಕ್‌ ಅಧಿಕಾರಿ ತಾಲಿಬಾನ್‌ ಘರ್ಷಣೆಯಲ್ಲಿ ಸಾವು

Sampriya

ಬುಧವಾರ, 25 ಜೂನ್ 2025 (14:52 IST)
Photo Credit X
2019 ರಲ್ಲಿ ಭಾರತೀಯ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆಹಿಡಿಯುವಲ್ಲಿ ಭಾಗಿಯಾಗಿದ್ದ ಪಾಕಿಸ್ತಾನಿ ಮೇಜರ್ ಮೊಯಿಜ್ ಅಬ್ಬಾಸ್ ಶಾ, ಖೈಬರ್ ಪಖ್ತುಂಕ್ವಾ ಪ್ರದೇಶದಲ್ಲಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಭಯೋತ್ಪಾದಕರೊಂದಿಗಿನ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಘರ್ಷಣೆಯಲ್ಲಿ ಸಾವನ್ನಪ್ಪಿದ ಇಬ್ಬರು ಸಿಬ್ಬಂದಿಗಳಲ್ಲಿ ಒಬ್ಬರಾಗಿದ್ದ. 

ಪಾಕಿಸ್ತಾನದ ದಕ್ಷಿಣ ವಜಿರಿಸ್ತಾನ್ ಜಿಲ್ಲೆಯಲ್ಲಿ ನಡೆದ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ (ಐಬಿಒ) ಭದ್ರತಾ ಪಡೆಗಳು 11 ಭಯೋತ್ಪಾದಕರನ್ನು ಕೊಂದಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ಕೂಡ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಿಲಿಟರಿ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

2019 ರಲ್ಲಿ ಅಭಿನವ್ ವರ್ತಮಾನ್ ವಿಂಗ್ ಕಮಾಂಡರ್ ಆಗಿದ್ದರು. ಆ ಸಮಯದಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಿತ್ತು.

ಈ ದಾಳಿಯಲ್ಲಿ, ಫೆಬ್ರವರಿ 14 ರಂದು 40 ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದ್ದರು. ನಂತರ ಜೈಶ್-ಎ-ಮೊಹಮ್ಮದ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡರು. ನಂತರ ಐಎಎಫ್ ಬಾಲಕೋಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೈಶ್ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತು. 
ಫೆಬ್ರವರಿ 27, 2019 ರಂದು, ಪಾಕಿಸ್ತಾನ ವಾಯುಪಡೆ ಮತ್ತು ಐಎಎಫ್ ನಡುವಿನ ನುಸುಳುವಿಕೆ ಹೋರಾಟದ ಸಮಯದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಸೆರೆಹಿಡಿಯಲಾಯಿತು.

ಪಾಕಿಸ್ತಾನದ ಎಫ್ -16 ಅನ್ನು ಹೊಡೆದುರುಳಿಸಲು ಆರ್ -73 ಕ್ಷಿಪಣಿಯನ್ನು ಹಾರಿಸಿದರು, ನಂತರ ಅವರು ಅಮ್ರಾಮ್ ಕ್ಷಿಪಣಿಯಿಂದ ಅವರ ಮಿಗ್ ಬೈಸನ್ ಅನ್ನು ಹೊಡೆದುರುಳಿಸಿದರು. ಅವರು ಇಳಿದ ತಕ್ಷಣ ಪಾಕಿಸ್ತಾನ ವಾಯುಪಡೆಯಿಂದ ಸೆರೆಹಿಡಿಯಲ್ಪಟ್ಟರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ