ಬಾಲಕಿಯನ್ನು ಅಪಹರಿಸಲು ಬಂದವರನ್ನು ಹೊಡೆದು ಸಾಯಿಸಿದ ಗ್ರಾಮಸ್ಥರು

ಭಾನುವಾರ, 9 ಸೆಪ್ಟಂಬರ್ 2018 (07:09 IST)
ಪಾಟ್ನಾ : ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಲು ಬಂದ ನಾಲ್ಕು ಜನರಲ್ಲಿ ಮೂವರನ್ನು ಗ್ರಾಮಸ್ಥರೇ ಹೊಡೆದು ಸಾಯಿಸಿದ ಘಟನೆ ಬಿಹಾರ ಬೇಗುಸಾರೈ ಜಿಲ್ಲೆಯಲ್ಲಿ ನಡೆದಿದೆ.


ಬೇಗುಸಾರೈ ಜಿಲ್ಲೆಯ ಮುಖೇಶ್ ಮಾಹ್ತೊ, ಬೌನ್ ಸಿಂಗ್ ಹಾಗೂ ಸಮಸ್ತಿಪುರ್ ಸಮೀಪ ರೋಸೆರಾ ಗ್ರಾಮದ ಹೀರಾ ಸಿಂಗ್ ಗ್ರಾಮಸ್ಥರ ಕೈಯಿಂದ ಸಾವನಪ್ಪಿದ ದುರ್ದೈವಿಗಳು. ನಾರಾಯಣಿಪಾರ್ ಸರ್ಕಾರಿ ಪ್ರಾಥಮಿಕ ಶಾಲೆಗೆ ಶುಕ್ರವಾರ ಮಧ್ಯಾಹ್ನ 2 ಗಂಟೆಯ ವೇಳೆ ಈ ಮೂವರು ಸೇರಿ ಒಟ್ಟು ನಾಲ್ಕು ಜನ ಬಂದು  ಬಾಲಕಿಯೊಬ್ಬಳ ಬಗ್ಗೆ ಮಾಹಿತಿ ಕೇಳಿದಾಗ ಯಾರು ಮಾಹಿತಿ ನೀಡದ ಕಾರಣ ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕಿದ್ದಾರೆ. ನಂತರ ಅವರ ಕೈಗೆ ಬಾಲಕಿ ಸಿಗುತ್ತಿದ್ದಂತೆ ಆಕೆಯನ್ನು ಅಪಹರಿಸಲು ಮುಂದಾಗಿದ್ದರು. ಇದರಿಂದಾಗಿ ಗಾಬರಿಗೊಂಡು ಮಕ್ಕಳು ಕಿರುಚಲು ಪ್ರಾರಂಭಿಸಿದ್ದಾರೆ.


ಆಗ ಸಮೀಪದಲ್ಲಿದ್ದ ಗ್ರಾಮಸ್ಥರು ಓಡಿಬಂದಾಗ ನಾಲ್ವರಲ್ಲಿ ಒಬ್ಬ ಪರಾರಿಯಾಗಿದ್ದು ಉಳಿದ ಮೂವರನ್ನು ಹಿಡಿದ ಗ್ರಾಮಸ್ಥರು ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆದಲ್ಲಿಯೇ  ಮೃತಪಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ