ಹಣ ಉಳಿಸಲು ಹೋಗಿ ದುರ್ಗತಿ ತಂದುಕೊಂಡ ಯುವತಿ

ಸೋಮವಾರ, 10 ಡಿಸೆಂಬರ್ 2018 (06:58 IST)
ಚೆನ್ನೈ : ಹಣ ಉಳಿಸಲು ಹೋಗಿ 23 ವರ್ಷದ ಬ್ಯಾಂಕ್ ಉದ್ಯೋಗಿಯೊಬ್ಬಳು ನಾಲ್ವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಘಟನೆ ತಮಿಳುನಾಡಿನ ಕುಂಬಕೋಣಂ ಜಿಲ್ಲೆಯಲ್ಲಿ ನಡೆದಿದೆ.


ಸಂತ್ರಸ್ತೆ ಮೂಲತಃ ದೆಹಲಿಯವರಾಗಿದ್ದು ನವೆಂಬರ್ 2ರಂದು ಕುಂಬಕೋಣಂಗೆ ಕೆಲಸ ನಿಮಿತ್ತ ಬಂದಿದ್ದಳು. ನಂತರ ಕೆಲಸ ಮುಗಿಸಿ ಆಟೋದಲ್ಲಿ ಹೋಗುವಾಗ ಆಟೋ ಚಾಲಕ ಅಧಿಕ ಹಣವನ್ನು ಕೊಡುವಂತೆ ಕೇಳಿದ್ದಾನೆ. ಈ ವಿಚಾರಕ್ಕೆ ಯುವತಿ ಚಾಲಕನ ಬಳಿ ವಾದ ಮಾಡಿದ್ದರಿಂದ ಕೋಪಗೊಂಡ ಆತ ಯುವತಿಯನ್ನು ದಾರಿ ಮಧ್ಯೆಯೇ ಬಿಟ್ಟು ಹೋಗಿದ್ದಾನೆ. ಆಗ ನಾಲ್ವರು ಬಂದು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ .


ಈ ಘಟನೆಯಿಂದ ಸಂತ್ರಸ್ತೆ ಆಘಾತಕ್ಕೆ ಒಳಗಾಗಿದ್ದು ಈ, ಬಗ್ಗೆ ಪೋಲೀಸರಿಗೆ  ದೂರು ನೀಡದ ಕಾರಣ ಘಟನೆಯ ಬಗ್ಗೆ ತಿಳಿದುಕೊಂಡ ಆಕೆಯ ಸಹೋದ್ಯೋಗಿಗಳು ನಾಲ್ವರು ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ವಿವಿಧ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಬಂಧಿತ ಆರೋಪಿಗಳನ್ನು ಕೋರ್ಟ್ ಡಿಸೆಂಬರ್ 20ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ