ಆಡಲು ಹೋದ ಬಾಲಕರು ನೀರುಪಾಲು

ಶುಕ್ರವಾರ, 18 ಮಾರ್ಚ್ 2022 (11:50 IST)
ಹೈದರಾಬಾದ್: ನೀರಿನಲ್ಲಿ ಆಡಲು ಹೋಗಿದ್ದ ಮೂವರು ಅಪ್ರಾಪ್ತ ಬಾಲಕರು ಮುಳುಗಿ ಸಾವನ್ನಪ್ಪಿದ್ದ ದುರಂತ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಏಳನೇ ತರಗತಿ ಓದುತ್ತಿದ್ದ ಆರು ಹುಡುಗರ ಗುಂಪು ಸಮೀಪದ ಕೆರೆಯೊಂದರಲ್ಲಿ ಈಜಲು ಹೋಗಿದ್ದರು. ಈ ಪೈಕಿ ಇಬ್ಬರು ನೀರಿಗಿಳಿದಿದ್ದರು. ಆದರೆ ಕೆರೆಯ ಆಳಗಲ ಅರಿಯದೇ ಗಾಬರಿಗೊಂಡಿದ್ದಾರೆ.

ಈ ವೇಳೆ ದಡದಲ್ಲಿದ್ದ ಇನ್ನೊಬ್ಬ ಬಾಲಕ ಸಹಾಯ ಮಾಡಲೆಂದು ನೀರಿಗೆ ಜಿಗಿದಿದ್ದಾನೆ. ಈ ವೇಳೆ ದುರಂತ ಸಂಭವಿಸಿದೆ. ಇದೀಗ ಮೃತದೇಹಗಳನ್ನು ಪೋಷಕರಿಗೆ ಒಪ್ಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ