ರೇಪ್ ಯತ್ನ: ಆರೋಪಿಗಳ ಪರ ವಹಿಸಿದ ಬಿಜೆಪಿ ಸಂಸದ

ಶುಕ್ರವಾರ, 6 ಜನವರಿ 2017 (12:17 IST)
ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲು ಯತ್ನಿಸಿದ ನಾಲ್ವರು ದುರುಳರು ಪ್ರತಿರೋಧ ವ್ಯಕ್ತ ಪಡಿಸಿದ್ದಕ್ಕೆ ಆಕೆಯ ಕಿವಿಯನ್ನೇ ಕತ್ತರಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಾಗ್ಪತ್‌ನಲ್ಲಿ ನಡೆದಿದೆ.  

ಜನವರಿ ನಾಲ್ಕರಂದು ಈ ಹೇಯ ಘಟನೆ ನಡೆದಿದ್ದು, ಬಲವಂತವಾಗಿ ಯುವತಿಯ ಮನೆಗೆ ನುಗ್ಗಿದ ನಾಲ್ವರು ಯುವಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲು ಪ್ರಯತ್ನ ಪಟ್ಟಿದ್ದರು. ಆದರೆ ಆಕೆ ಅವರ ದುಷ್ಕೃತ್ಯಕ್ಕೆ ತೀವ್ರ ಪ್ರತಿರೋಧ ಒಡ್ಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ದುರುಳರು ಆಕೆಯ ಕಿವಿಗೆ ಕತ್ತರಿ ಹಾಕಿದ್ದಾರೆ. ಈ ಕುರಿತು ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 
 
ಮತ್ತೂ ಆಘಾತಕಾರಿ ಸಂಗತಿ ಎಂದರೆ, ಈ ಕುರಿತು ಪ್ರತಿಕ್ರಿಯಿಸಿರುವ ಬಾಗ್ಪತ್ ಪ್ರತಿನಿಧಿಸುವ ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್, ಅತ್ಯಾಚಾರ ಯತ್ನ ನಡೆದಿಲ್ಲ. ಪೀಡಿತೆ ನೀಡಿರುವ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿದ್ದಾರೆ. 
 
ಈ ಕುರಿತು ನಾನು ಜಿಲ್ಲಾ ಪೊಲೀಸ್ ಅಧೀಕ್ಷಕರ ಬಳಿ ಮಾತನಾಡಿದ್ದೇನೆ. ಡಿಸೆಂಬರ್ 31 ರಂದು ನೆರೆಹೊರೆಯವರ ಮಧ್ಯೆ ಈ ಘಟನೆ ನಡೆದಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಹಲವು ದಿನಗಳ ಬಳಿಕ ದೂರು ದಾಖಲಾಗಿದೆ ಎಂದರೆ ಇದು ಪಿತೂರಿ ಎನ್ನಿಸುತ್ತಿದೆ ಎಂದಿದ್ದಾರೆ. 
 
 
 

ವೆಬ್ದುನಿಯಾವನ್ನು ಓದಿ