ನಿರ್ಗಮನದ ಸಮಯದಲ್ಲಿ ವಿವಾದ ಮೈಮೇಲೆಳೆದುಕೊಂಡ ಉಪರಾಷ್ಟ್ರಪತಿ
ಈ ಹೇಳಿಕೆಗೆ ಇದೀಗ ಬಿಜೆಪಿ ಸೇರಿದಂತೆ ಹಲವೆಡೆಯಿಂದ ವಿರೋಧ ವ್ಯಕ್ತವಾಗಿದೆ. ‘ಭಾರತದಷ್ಟು ಸುರಕ್ಷಿತ ಸ್ಥಳ ಮುಸ್ಲಿಮರಿಗೆ ಬೇರೊಂದಿಲ್ಲ. ಹಾಗೆಯೇ ಹಿಂದೂಗಳಷ್ಟು ಒಳ್ಳೆಯ ಸ್ನೇಹಿತರೂ ಮುಸ್ಲಿಮರಿಗಿಲ್ಲ’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. 10 ವರ್ಷಗಳ ಕಾಲ ಹಿಂದೂ ಬಹುಸಂಖ್ಯಾತರಿರುವ ದೇಶವೊಂದು ಮುಸ್ಲಿಮರಾದ ನಿಮ್ಮನ್ನು ರಾಷ್ಟ್ರಪತಿಯಾಗಿ ಇರಿಸಿಕೊಂಡಿದೆ ಎಂದರೆ ಅದಕ್ಕಿಂತ ದೊಡ್ಡ ಗೌರವ ನಿಮಗೆ ಬೇಕೇ ಎಂದು ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಪ್ರಶ್ನಿಸಿದ್ದಾರೆ.