ನಿರ್ಮಲಾ ಸೀತಾರಾಮನ್ ಪ್ಯಾಕೇಜ್ ನಲ್ಲಿ ಏನೇನಿರಬಹುದು?

ಬುಧವಾರ, 13 ಮೇ 2020 (10:03 IST)
ನವದೆಹಲಿ: ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮಧ್ಯಮ ವರ್ಗದವರಿಗೆ ನೆರವಾಗುವಂತೆ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದ ಪ್ರಧಾನಿ ಮೋದಿ ಜನರಲ್ಲಿ ನಿರೀಕ್ಷೆ ಹುಟ್ಟಿಸಿದ್ದಾರೆ.


ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದಿನಿಂದ ಹಂತ ಹಂತವಾಗಿ ವಿವಿಧ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ ಎಂದು ಪ್ರಧಾನಿ ಮೋದಿ ನಿನ್ನೆ ದೇಶವನ್ನುದ್ದೇಶಿಸಿ ಮಾತನಾಡುವಾಗ ಹೇಳಿದ್ದರು.

ಸಣ್ಣ ಉದ್ಯಮಗಳಿಗೆ, ಮಧ್ಯಮ ವರ್ಗದವರಿಗೆ ಸರ್ಕಾರ ಯಾವ ರೀತಿ ಪ್ಯಾಕೇಜ್ ನೀಡಬಹುದು ಎಂಬುದು ಕುತೂಹಲವಾಗಿದೆ. ಮೂಲಗಳ ಪ್ರಕಾರ ಆರ್ಥಿಕತೆ, ಹಣಕಾಸಿನ ಹರಿವಿಗೆ ಉತ್ತೇಜನ ನೀಡುವಂತಹ ಪ್ಯಾಕೇಜ್ ಘೋಷಿಸುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ