ಎನ್.ಪಿ.ಆರ್ ಗೆ ಬೆಂಬಲಿಸುವೆ ಎಂದ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ಶರದ್ ಪವಾರ್ ಹೇಳಿದ್ದೇನು?

ಬುಧವಾರ, 19 ಫೆಬ್ರವರಿ 2020 (08:41 IST)
ನವದೆಹಲಿ : ಎನ್.ಪಿ.ಆರ್ ಗೆ ತಮ್ಮ ಬೆಂಬಲವಿದೆ ಎಂಬ ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಯಿಂದ ಮೈತ್ರಿಸರ್ಕಾರದಲ್ಲಿ ಭಿನ್ನಮತ ಕಂಡುಬಂದಿದ್ದು, ಇದೀಗ ಬಗ್ಗೆ ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ್ ಪ್ರತಿಕ್ರಿಯೆ ನೀಡಿದ್ದಾರೆ.


ಈ ಬಗ್ಗೆ ಮಾತನಾಡಿದ ಶರದ್ ಪವಾರ್, ಎನ್.ಪಿ.ಆರ್  ಬೆಂಬಲಿಸುವ ವಿಚಾರ ಸಂಬಂಧ ನಾನು ಉದ್ಧವ್ ಠಾಕ್ರೆ ಜೊತೆ ಮಾತನಾಡುತ್ತೇನೆ. ಶಿವಸೇನೆಯೊಂದಿಗೆ ಚರ್ಚಿಸಿ ಒಮ್ಮತಕ್ಕೆ ಬರುತ್ತೇವೆ, ಸದ್ಯ ಕಾಂಗ್ರೆಸ್ ಮತ್ತು ಎನ್.ಸಿ.ಪಿ ಸಿಎಎ ಮತ್ತು ಎನ್.ಪಿ.ಆರ್   ವಿರುದ್ಧ ನಿಲುವು ಹೊಂದಿರುವಾಗ ಹೀಗೆ ಮೈತ್ರಿ ನಾಯಕರು ಭಿನ್ನ ಹೇಳಿಕೆ ನೀಡಿರುವುದು ಮೈತ್ರಿ ಸರ್ಕಾರದಲ್ಲಿ ಭಿನ್ನ ಮತ ಭುಗಿಲೇಳುವ ಸಂಭವವಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ