ನಿರ್ಭಯಾ ಪ್ರಕರಣದ ದೋಷಿಗಳಿಗೆ ಮಾರ್ಚ್ 3 ರಂದು ಗಲ್ಲು ಶಿಕ್ಷೆ

ಮಂಗಳವಾರ, 18 ಫೆಬ್ರವರಿ 2020 (08:42 IST)
ನವದೆಹಲಿ : ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ನಿರ್ಭಯಾ ಪ್ರಕರಣದ ದೋಷಿಗಳಿಗೆ ಕೊನೆಗೂ ಮಾರ್ಚ್ 3 ರಂದು  ಗಲ್ಲು ಶಿಕ್ಷೆಗೆ ಜಾರಿಯಾಗಿದೆ.


ಮುಖೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ, ಅಕ್ಷಯ್ ಠಾಕೂರ್ ಗಲ್ಲು ಶಿಕ್ಷೆಗೆ ಗುರಿಯಾದ ದೋಷಿಗಳು. ಇವರಿಗೆ ಮಾರ್ಚ್ 3ರಂದು ಬೆಳಿಗ್ಗೆ 6 ಗಂಟೆಗೆ ಡೆತ್ ವಾರೆಂಟ್ ಜಾರಿ ಮಾಡಿ ಪಟಿಯಾಲಾ ಕೋರ್ಟ್ ಆದೇಶಿಸಿದೆ.


ಇದು ಮೂರನೇ ಬಾರಿ ಕೋರ್ಟ್ ನಿಂದ ಡೆತ್ ವಾರೆಂಟ್ ಜಾರಿಯಾಗಿದ್ದು, ರಾಜಕೀಯ ನಾಯಕರ ಒತ್ತಡದಿಂದ ಗಲ್ಲು ಶಿಕ್ಷೆ ದಿನಾಂಕ ಪ್ರಕಟಿಸಲಾಗಿದೆ ಎಂದು ದೋಷಿ ಪರ ವಕೀಲರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ