ನಾಲ್ವರು ಮಕ್ಕಳ ಕೊಂದು ಆತ್ಮಹತ್ಯೆಗೆ ಯತ್ನಿಸಿದ ವಿಧುರ

ಸೋಮವಾರ, 20 ಸೆಪ್ಟಂಬರ್ 2021 (12:06 IST)
ಜೈಪುರ: ನಾಲ್ವರು ಅಪ್ರಾಪ್ತ ಮಕ್ಕಳನ್ನು ಕೊಂದು ವಿಧುರನೊಬ್ಬ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.


ಕೆಲವು ತಿಂಗಳುಗಳ ಹಿಂದೆ ಪತ್ನಿ ಕೊರೋನಾ ಸೋಂಕಿನಿಂದ ತೀರಿಕೊಂಡಿದ್ದಳು. ಇದಾದ ಬಳಿಕ ಆರೋಪಿ ಮಾನಸಿಕ ಖಿನ್ನತೆಗೊಳಗಾಗಿದ್ದ. ನಾಲ್ವರು ಮಕ್ಕಳು ಅತ್ತೆ ಮನೆಯಲ್ಲಿದ್ದರು.

ತನ್ನ ಮಕ್ಕಳನ್ನು ಸಾಕುವ ಬಗ್ಗೆ ಚಿಂತಿತನಾಗಿದ್ದ ವ್ಯಕ್ತಿ ಪತ್ನಿಯ ಸಹೋದರಿಯನ್ನೇ ಮದುವೆ ಮಾಡಿಕೊಡುವಂತೆ ಅತ್ತೆ ಮನೆಯವರಿಗೆ ಕೇಳಿಕೊಂಡಿದ್ದ. ಆದರೆ ಅವರು ನಿರಾಕರಿಸಿದ್ದರು. ಇದರಿಂದ ಮನನೊಂದ ಆರೋಪಿ ನಾಲ್ವರು ಮಕ್ಕಳನ್ನು ನೀರಿನಲ್ಲಿ ಟ್ಯಾಂಕ್ ನಲ್ಲಿ ಮುಳುಗಿಸಿ ಹತ್ಯೆ ಮಾಡಿ ತಾನೂ ವಿಷ ಸೇವಿಸಿ ಜೀವ ಕಳೆದುಕೊಳ್ಳಲು ಪ್ರಯತ್ನಿಸಿದ್ದಾನೆ. ದುರದೃಷ್ಟವಶಾತ್ ಮಕ್ಕಳು ಸಾವನ್ನಪ್ಪಿದ್ದು, ಆರೋಪಿ ಬದುಕುಳಿದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ