ವಿಚ್ಛೇದಿತನಾಗಿರುವ ಆರೋಪಿ ಕಳೆದ ಒಂದು ವರ್ಷದಿಂದ ಕರುಣಾಳನ್ನು ಪ್ರೀತಿಸುತ್ತಿದ್ದ ಮತ್ತು ಮದುವೆಯಾಗುವಂತೆ ಕಾಡುತ್ತಿದ್ದ. ಈ ಕುರಿತು ಆಕೆಯ ಪೋಷಕರು ಪೊಲೀಸರಲ್ಲಿ ದೂರು ಕೂಡ ನೀಡಿದ್ದರು. ಆದರೆ ಎರಡು ಕುಟುಂಬ ರಾಜಿಯಾಗಿದ್ದರಿಂದ ಪ್ರಕರಣ ಇತ್ಯರ್ಥವಾಗಿತ್ತು. ಆದರೆ ಸುರೇಂದ್ರ ಸಿಂಗ್ ಆಕೆಯನ್ನು ಹಿಂಬಾಲಿಸುವುದನ್ನು ಬಿಟ್ಟಿರಲಿಲ್ಲ ಎಂದು ತಿಳಿದು ಬಂದಿದೆ.