ಕಾಂಗ್ರೆಸ್ ಮುಕ್ತ ಭಾರತದ ಅಪೇಕ್ಷೆ ಈಡೇರಿದೆ: ಯಡಿಯೂರಪ್ಪ

ಶನಿವಾರ, 11 ಮಾರ್ಚ್ 2017 (12:16 IST)
ಉತ್ತರಪ್ರದೇಶ ಮತ್ತು ಉತ್ತರಾಖಂಡ್`ನಲ್ಲಿ ಬಿಜೆಪಿ ಗೆಲುವಿನಿಂದ ಕಾಂಗ್ರೆಸ್ ಮುಕ್ತ ಭಾರತದ ಅಪೇಕ್ಷೆ ಈಡೇರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಶ್ಲೇಷಿಸಿದ್ದಾರೆ.

ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ನರೇಂದ್ರಮೋದಿಯವರ ಹೋರಾಟದ ಗೆಲುವು ಇದಾಗಿದ್ದು, ನೋಟು ಅಮಾನ್ಯೀಕರಣವನ್ನ ಜನ ಒಪ್ಪಿಕೊಂಡಿದ್ದಾರೆ. ಇದೇವೇಳೆ, ರಾಜ್ಯದ ಮೇಲೂ ಈ ಫಲಿತಾಂಶ ಪ್ರಭಾವ ಬೀರಲಿದ್ದು, ಉಪಚುನಾವಣೆಯ ರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ. ಮುಂದಿನ ವಿಧಾನಸಭೆಯಲ್ಲಿ ಬಿಜೆಪಿ 150ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಸಬ್ ಕೆ ಸಾಥ್.. ಸಬ್ ಕಾ ವಿಕಾಸ್ ಎಂಬ ಪ್ರಧಾನಮಂತ್ರಿಯವರ ಘೋಷವಾಕ್ಯ ಪ್ರಭಾವ ಬೀರಿದೆ ಎಂದಿದ್ದಾರೆ ಯಡಿಯೂರಪ್ಪ.

ವೆಬ್ದುನಿಯಾವನ್ನು ಓದಿ