ಕಾಶ್ಮಿರ ಒಂದಿಲೊಂದು ದಿನ ಪಾಕಿಸ್ತಾನದ ಭಾಗವಾಗುವುದನ್ನು ನೋಡಲು ಕಾಯುತ್ತಿದ್ದೇವೆ ಎನ್ನುವ ಪಾಕ್ ಪ್ರಧಾನಿ ಷರೀಫ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಷ್ಮಾ ಸ್ವರಾಜ್, ಜಮ್ಮು ಕಾಶ್ಮಿರದ ಸಂಪೂರ್ಣ ಭಾಗ ಭಾರತದ ಸ್ವರ್ಗವಾಗಿದೆ. ಸ್ವರ್ಗವನ್ನು ನರಕ ಮಾಡಲು ನಾವು ಬಿಡುವುದಿಲ್ಲ ಎಂದು ಗುಡುಗಿದರು.
ಪಾಕಿಸ್ತಾನದ ಕೆಟ್ಟ ಹಣ, ಅಪಾಯಕಾರಿ ಭಯೋತ್ಪಾದಕರು ಮತ್ತು ಅಸ್ಥಿರ ಸರಕಾರದಿಂದ ಭಾರತವನ್ನು ಅಸ್ತವ್ಯಸ್ಥಗೊಳಿಸುವ ಹುನ್ನಾರ ನಡೆದಿದೆ. ಆದರೆ, ಪಾಕಿಸ್ತಾನ ಹಗಲು ಗನಸು ಕಾಣುವುದು ಬಿಟ್ಟರೆ ಸೂಕ್ತ ಎಂದು ಲೇವಡಿ ಮಾಡಿದ್ದಾರೆ.