ಧ್ಯಾನಚಂದ್‌ ಭಾರತ ರತ್ನದ ಹಕ್ಕುದಾರ : ಮಿಲ್ಕಾ ಸಿಂಗ್‌

ಶನಿವಾರ, 23 ನವೆಂಬರ್ 2013 (18:58 IST)
PR
ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌‌ ಭಾರತ ರತ್ನ ಪ್ರಶಸ್ತಿಯ ಹಕ್ಕುದಾರರಾಗಿದ್ದಾರೆ ಮತ್ತು ಈ ಪ್ರಶಸ್ತಿ ಧ್ಯಾನ್‌ಚಂದ್‌ ಅವರಿಗೆ ಸಿಗಲೇ ಬೇಕು ಎಂದು ಖ್ಯಾತ ಅಥ್ಲೆಟಿಕ ಮಿಲ್ಕಾಸಿಂಗ್‌ ಒತ್ತಾಯಿಸಿದ್ದಾರೆ .

ಧ್ಯಾನ್‌ಚಂದ್‌ ಭಾರತರತ್ನ ಪ್ರಶಸ್ತಿಯ ಹಕ್ಕುದಾರ. ಇವರಂತಹ ಮತ್ತೊಬ್ಬ ಆಟಗಾರ ಹುಟ್ಟಿಬರಲು ಸಾಧ್ಯವಿಲ್ಲ . ಸಚಿನ ಅವರಿಗೆ ಭಾರತರತ್ನ ನೀಡಿರುವುದು ಸರಿಯಾಗಿದೆ , ಧ್ಯಾನ್‌ಚಂದ್‌ ಅವರಿಗೂ ಕೂಡ ಪ್ರಶಸ್ತಿ ನೀಡಬೇಕು ಎಂದು ಮಿಲ್ಕಾ ಸಿಂಗ್‌ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಧ್ಯಾನ್‌ಚಂದ್‌ ಅವರಿಗೂ ಕೂಡ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬ ಒತ್ತಡ ಮತ್ತು ಹೇಳಿಕೆಗಳು ಹೆಚ್ಚಾಗಿ ಬರುತ್ತಿವೆ. ಸಚಿನ್‌ ಅವರ ಜೊತೆಗೆ ಧ್ಯಾನ್‌ಚಂದ್‌ಗೂ ಕೂಡ ಭಾರತ ರತ್ನ ನೀಡುವುದು ಸಮಂಜಸ ಎಂದು ಕ್ರೀಡಾ ಅಭಿಮಾನಗಳ ವಾದವಾಗಿದೆ .

ವೆಬ್ದುನಿಯಾವನ್ನು ಓದಿ