ಒಲಿಂಪಿಕ್ಸ್‌‌ ಆಯ್ಕೆ- ನಿರ್ಲಕ್ಷ್ಯಕ್ಕೊಳಗಾದ ರೀನಾ

ಗುರುವಾರ, 24 ಜುಲೈ 2008 (18:13 IST)
ಬೀಜಿಂಗ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌‌ನಲ್ಲಿ ಭಾರತವನ್ನು 57 ಕ್ರೀಡಾಳುಗಳು ಪ್ರತಿನಿಧಿಸಲಿದ್ದು, ಇದರಲ್ಲಿ ಬಹು ನಿರೀಕ್ಷೆಯನ್ನು ಹೊಂದಿದ್ದ ಬಿಲ್ಲುಗಾರ್ತಿ ರೀನಾ ಕುಮಾರಿಯನ್ನು ಆಯ್ಕೆ ಮಾಡದೆ ನಿರ್ಲಕ್ಷ್ಯಿಸಿರುವುದಾಗಿ ಎಂದು ದೂರಿದ್ದಾರೆ.

ಆಯ್ಕೆ ಪ್ರಕ್ರಿಯೆಯಲ್ಲಿ ಮೋಸ ನಡೆದಿರುವುದಾಗಿ ಗಂಭೀರವಾಗಿ ಆರೋಪಿಸಿರುವ ರೀನಾ ಕುಮಾರಿ ಅವರು, ಕ್ರೀಡಾ ಸಚಿವ ಎಂ.ಎಸ್.ಗಿಲ್ ಅವರನ್ನು ಭೇಟಿಯಾಗಿ ದೂರಿದ್ದಾರೆ. ಬಿಲ್ಲುಗಾರರ ತಂಡದಲ್ಲಿ ಪುರುಷ ಸ್ಪರ್ಧಿ ಮಂಗಲ್ ಸಿಂಗ್ ಚಾಂಪಿಯಾನನ್ನು ಹೊರತುಪಡಿಸಿ, ಉಳಿದಂತೆ ಮಹಿಳಾ ಪ್ರತಿನಿಧಿಗಳಾದ ದೋಲಾ ಬ್ಯಾನರ್ಜಿ, ಪ್ರಣೀತಾ ವರ್ಧಿನೇನಿ ಮತ್ತು ಎಲ್. ಬೊಂಬಾಯಾಲಾ ದೇವಿಯನ್ನು ಆಯ್ಕೆ ಮಾಡಲಾಗಿದೆ.

ಇನ್ನುಳಿದಂತೆ 17 ಮಂದಿ ಕ್ರೀಡಾ ತಂಡದಲ್ಲಿ ಲಾಂಗ್ ಜಂಪರ್ ಅಂಜು ಬಾಬ್ಬಿ ಜಾರ್ಜ್, ಶೂಟಿಂಗ್‌ನ ರಾಜ್ಯವರ್ಧನ್ ಸಿಂಗ್ ರಾಥೋಡ್ ಸೇರಿದ್ದಾರೆ. ಅಲ್ಲದೇ ಭಾರತ ಬಾಕ್ಸಿಂಗ್‌‌ ಸ್ಪರ್ಧೆಗಾಗಿ ಹೆಚ್ಚಿನ ಸ್ಪರ್ಧಿಗಳನ್ನು ಕಳುಹಿಸುತ್ತಿದ್ದು, ಇದರಲ್ಲಿ ವಿಜೆಯೇಂದ್ರ ಅವರು ಪದಕ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ.

ಈಜು ಸ್ಪರ್ಧೆಯಲ್ಲಿಯೂ ನಿರೀಕ್ಷೆ ಹೊಂದಿರುವ ಭಾರತದ ತಂಡದಲ್ಲಿ ಟೆನ್ನಿಸ್ ತಾರೆಯರಾದ ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ಮತ್ತು ಸುನೀತಾ ರಾವ್ ಸೇರಿದ್ದಾರೆ.

ಅಲ್ಲದೇ ತಂಡದಲ್ಲಿ ಮೂರು ಮಂದಿ ಕುಸ್ತಿಪಟುಗಳು, ಕೆಲವು ಅಂಬಿಗರು, ಟೇಬಲ್ ಟೆನ್ನಿಸ್, ಜುಡೋ, ಬ್ಯಾಡ್ಮಿಂಟನ್, ವೇಯ್ಟ್ ಲಿಪ್ಟಿಂಗ್, ಹಾಯಿದೋಣಿ ವಿಹಾರ ಕ್ರೀಡಾಳುಗಳು ಸೇರಿದ್ದಾರೆ.

ವೆಬ್ದುನಿಯಾವನ್ನು ಓದಿ