ಚೆನ್ನೈನಲ್ಲಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯಾವಳಿ

ಬುಧವಾರ, 13 ಜುಲೈ 2011 (18:12 IST)
PTI
ಮುಂದಿನ ವರ್ಷದ ಏಪ್ರಿಲ್- ಮೇ ತಿಂಗಳಲ್ಲಿ ನಗರದಲ್ಲಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದ್ದು, ಪ್ರಶಸ್ತಿ ಪಂದ್ಯ ಹಾಲಿ ಚಾಂಪಿಯನ್ ವಿಶ್ವನಾಥನ್ ಆನಂದ್ ಮತ್ತು ಇಸ್ರೇಲ್‌ನ ಬೊರಿಸ್ ಜೆಲ್‌ಫಾಂಡ್ ವಿರುದ್ಧ ಹಣಾಹಣಿ ನಡೆಯಲಿದೆ.

ವಿಶ್ವಮಟ್ಟದ ಚೆಸ್ ಪಂದ್ಯಾವಳಿಗೆ ತಮಿಳುನಾಡು ಸರಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಜೆ.ಜಯಲಲಿತಾ ಭರವಸೆ ನೀಡಿದ್ದಾರೆ.

ವಿಶ್ವ ಚೆಸ್ ಫೆಡರೇಶನ್ ಅಧ್ಯಕ್ಷ ಕಿರ್ಸಾನ್ ಇಲಿಯುಝಿನೋವ್, ಮುಖ್ಯಮಂತ್ರಿ ಜಯಲಲಿತಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಫೆಡರೇಶನ್ ಹೊರಡಿಸಿದ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ.

ವಿಶ್ವ ಚೆಸ್ ಚಾಂಪಿಯನ್‌ 12 ಪಂದ್ಯಗಳ ಸರಣಿಗೆ ಒಟ್ಟು 20 ಕೋಟಿ ರೂಪಾಯಿ ವೆಚ್ಚವಾಗಲಿದೆ. ಸರಕಾರ ಕೂಡಾ ಆರ್ಥಿಕ ನೆರವು ನೀಡಲಿದೆ ಎಂದು ಹೇಳಿದ್ದಾರೆ.

ವಿಶ್ವನಾಥನ್ ಆನಂದ್, ಕಳೆದ ವರ್ಷ ಬುಲ್ಗೇರಿಯಾದ ವಾಸೆಲಿನ್ ಟೊಪಾಲೊವ್ ವಿರುದ್ಧ 6.5-5.5 ಪಾಯಿಂಟ್‌ಗಳ ಅಂತರದಿಂದ ಸೋಲಿಸಿ ವಿಶ್ವಚಾಂಪಿಯನ್‌ ಪ್ರಶಸ್ತಿ ಪಡೆದಿದ್ದರು.

ವೆಬ್ದುನಿಯಾವನ್ನು ಓದಿ