ನರಸಿಂಗ್ ಅಮಾಯಕರಾಗಿದ್ದು, ಯಾವುದೇ ತಪ್ಪು ಮಾಡಿಲ್ಲ, ಅವರಿಗೆ ಬೆಂಬಲವಾಗಿ ನಿಲ್ಲುವುದಾಗಿ ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.
ನರಸಿಂಗ್ ನಿಷ್ಕಳಂಕ ದಾಖಲೆ ಹೊಂದಿದ್ದು, ಒಲಿಂಪಿಕ್ಸ್ಗೆ ಕೆಲವೇ ದಿನಗಳ ಮುಂಚೆ ನಿಷೇಧಿತ ವಸ್ತುವನ್ನು ಉಲ್ಲೇಖಿಸಿ ಅವರ ವೃತ್ತಿಜೀವನ ಹಾಳುಮಾಡುವುದು ಮೂರ್ಖತನ ಎಂದು ಡಬ್ಲ್ಯುಎಫ್ಐ ಮುಖ್ಯಸ್ಥ ಹೇಳಿದರು. ನರಸಿಂಗ್ ರಾವ್ ನಮಗೆ ಪತ್ರಮುಖೇನ ಬರೆದು ಅವರ ವಿರುದ್ಧ ಪಿತೂರಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.