ಪಂದ್ಯದ ನಂತರ ವರದಿಗಾರರೊಂದಿಗೆ ಮಾತನಾಡುತ್ತಿದ್ದ ಕೊಹ್ಲಿ "ರಕ್ಷಣಾತ್ಮಕ ಮತ್ತು ನಕಾರಾತ್ಮಕ ಧೋರಣೆಯನ್ನು ಕಳಚಿದ ನಮ್ಮ ಹುಡುಗರು ಧನಾತ್ಮಕ ಮತ್ತು ಆಕ್ರಮಣಕಾರಿ ಆಟಕ್ಕೆ ಮಹತ್ವ ನೀಡಿದರು. ಆದ್ದರಿಂದ ನಾವು ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಯಿತು. ಬ್ಯಾಟ್ಸಮೆನ್ನಿಂದ ದಂಡಿಸಿಕೊಳ್ಳುತ್ತಿದ್ದರೂ ಬೌಲರ್ ವಿಕೆಟ್ ಪಡೆದುಕೊಳ್ಳುವತ್ತ ಗಮನ ನೀಡಬೇಕೆ, ವಿನಃ ಹತಾಶೆಯಿಂದ ಕೈ ಚೆಲ್ಲಬಾರದು. ಆ ಬದಲಾವಣೆ ನಮ್ಮ ತಂಡಕ್ಕೆ ಅಗತ್ಯವೆನಿಸಿದೆ" ಎಂದ ಹೇಳಿದರು.
"ಕ್ಲೀನ್ ಸ್ವೀಪ್ ಗೆಲುವು ದಾಖಲಿಸುವುದು ಅದು ವಿಶೇಷವಾಗಿ, ಉಪಖಂಡದ ಸಹ ತಂಡದ ವಿರುದ್ಧ ಉಪಖಂಡದಲ್ಲೇ! ನಿಜಕ್ಕೂ ಸುಲಭದ ಮಾತಲ್ಲ. ಇದು ತುಂಬಾ ಕಷ್ಟದ ವಿಷಯ. ನಾನು ಬಯಸಿದ ರೀತಿಯಲ್ಲೇ ಪ್ರತಿಕ್ರಿಯಿಸಿದ ನಮ್ಮ ತಂಡದ ಹುಡುಗರ ಆಟದ ಬಗ್ಗೆ ನಿಜಕ್ಕೂ ಸಂತೋಷವಾಗುತ್ತಿದೆ. ತಂಡದ ನಾಯಕನಾಗಿ ನನಗಿ ವಿಜಯ ತೃಪ್ತಿ ತಂದಿದೆ "ಎಂದು ಕೊಹ್ಲಿ ತಮ್ಮ ತಂಡದ ಸದಸ್ಯರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.