ವಿಶ್ವನಾಥನ್ ಆನಂದ್ ಅವರು ವಿಶ್ವ ಮಟ್ಟದಲ್ಲಿ ಕೀರ್ತಿ ಸಾಧಿಸಲು ಮೂಲ ಕಾರಣ, ಪ್ರೇರಣೆ ಅವರೇ ಆಗಿದ್ದರು. ಬಾಲ್ಯದಲ್ಲಿ ಮಗನಿಗೆ ಚೆಸ್ನ ಮೂಲಪಾಠಗಳನ್ನು ಮೊದಲ ಬಾರಿಗೆ ಹೇಳಿಕೊಟ್ಟಿದ್ದೇ ತಾಯಿ ಸುಶೀಲಾ. ಬಾಲ್ಯದಲ್ಲಿ ಆನಂದ್ ಅವರಿಗೆ ಆಟದಲ್ಲಿ ಅಮ್ಮನೇ ಪ್ರಬಲ ಎದುರಾಳಿಯಾಗಿದ್ದರು. ಅವರು ನೈಪುಣ್ಯತೆ ಸಾಧಿಸುವಲ್ಲಿ ಅವರ ತಾಯಿ ಪ್ರಮುಖ ಪಾತ್ರ ವಹಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಗ್ರ್ಯಾಂಡ್ ಮಾಸ್ಟರ್ ಆರ್. ಬಿ ರಮೇಶ್, "ಆನಂದ್ ಇಲ್ಲದೇ ಭಾರತೀಯ ಚೆಸ್ನ್ನು ಕಲ್ಪಿಸಿಕೊಳ್ಳುವುದು ಕಷ್ಟ, ಅವರಮ್ಮನನ್ನು ಹೊರತು ಪಡಿಸಿ ಆನಂದನನ್ನು ಕಲ್ಪಿಸಿಕೊಳ್ಳುವುದು ಸಹ ಕಷ್ಟ", ಎಂದಿದ್ದಾರೆ.