ಭಾರತದ ಬಾಕ್ಸರ್ ಮನೋಜ್ ಕುಮಾರ್ ಅರ್ಜುನ ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥ ಕಪಿಲ್ ದೇವ್ ತಮಗೆ ಬೆಂಬಲ ನೀಡದಿರುವುದಕ್ಕೆ ತರಾಟೆಗೆ ತೆಗೆದುಕೊಂಡರು. ಮನೋಜ್ ಇಂದು ಕ್ರೀಡಾ ಸಚಿವ ಸರ್ಬಾನಂದ ಸೋನೋವಾಲ್ ಅವರಿಂದ ಪ್ರತಿಷ್ಠಿತ ಅರ್ಜುನಾ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ತಮ್ಮನ್ನು ಪ್ರಶಸ್ತಿ ಸಮಿತಿ ಇದಕ್ಕೆ ಮುಂಚೆ ಕಡೆಗಣಿಸಿದ್ದರ ಬಗ್ಗೆ ಬೇಸರದಿಂದ ಮಾತನಾಡಿದರು.
ತಮ್ಮ ಸಂದೇಶವನ್ನು ಮುಟ್ಟಿಸುವುದಕ್ಕೆ ಕಪಿಲ್ಗೆ ಕರೆ ಮಾಡಿದಾಗ ಅವರು ಫೋನ್ ಸಂಪರ್ಕ ಕಟ್ ಮಾಡಿದರು.ನಾನು ಕಪಿಲ್ಗೆ ಕರೆ ಮಾಡಿ ನಾನು ಬಾಕ್ಸರ್ ಮನೋಜ್. ಸಿಡಬ್ಲ್ಯುಜಿನಲ್ಲಿ ಚಿನ್ನದ ಪದಕ ಗೆದ್ದಿದ್ದೇನೆ.
ಅರ್ಜುನ ಪ್ರಶಸ್ತಿ ಪಟ್ಟಿಯಿಂದ ನನ್ನ ಹೆಸರು ತೆಗೆದು ಕಂಚಿನ ಪದಕ ಗೆದ್ದವರಿಗೆ ಪದಕ ಕೊಡುತ್ತಿದ್ದೀರಿ ಎಂದು ಹೇಳಿದಾಗ ಅವರು ನನಗೆ ಅವೆಲ್ಲಾ ಮಾತನಾಡಲು ಇಷ್ಟವಿಲ್ಲ ಎಂದು ಕಪಿಲ್ ಹೇಳಿ ಫೋನ್ ಕಟ್ ಮಾಡಿದ್ದಾರೆಂದು ತಿಳಿಸಿದರು.