ಕುಸ್ತಿಪಟು ರವಿಕುಮಾರ್ ಕೈಗೆ ಬಲವಾಗಿ ಕಚ್ಚಿದ್ದ ಎದುರಾಳಿ! ಇದು ಅನ್ಯಾಯ ಎಂದ ಸೆಹ್ವಾಗ್

ಗುರುವಾರ, 5 ಆಗಸ್ಟ್ 2021 (10:15 IST)
ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಪುರುಷರ 57 ಕೆ.ಜಿ. ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಸೆಮಿಫೈನಲ್ ನಲ್ಲಿ ಭಾರತದ ರವಿಕುಮಾರ್ ದಹಿಯಾ ಗೆ ಎದುರಾಳಿ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿತ್ತು.


ರವಿಕುಮಾರ್ ಈ ಪಂದ್ಯವನ್ನು ಗೆದ್ದುಕೊಂಡು ಇದೀಗ ಫೈನಲ್ಸ್ ನಲ್ಲಿ ಆಡಲಿದ್ದಾರೆ. ಆದರೆ ಈ ಪಂದ್ಯದ ವೇಳೆ ಎದುರಾಳಿ ಆಟಗಾರ ಕಝಕಿಸ್ತಾನದ ನುರಿಸ್ಲಾಮ್, ರವಿಕುಮಾರ್ ರ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲು ಅವರ ಕೈಯ ಮಾಂಸಖಂಡಗಳ ಮೇಲೆ ಬಲವಾಗಿ ಕಚ್ಚಿ ಗಾಯಗೊಳಿಸಿದ್ದಾರೆ.

ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲಿನಿಂದ ಬಲವಾಗಿ ಕಚ್ಚಿ ಗಾಯ ಮಾಡಿದರೂ ಎದುರಾಳಿಯನ್ನು ಬಿಡದೇ ನೆಲಕ್ಕುರುಳಿಸಿದ ರವಿಕುಮಾರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೊಂದೆಡೆ ಈ ಫೋಟೋ ಪ್ರಕಟಿಸಿರುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಇದು ಮೋಸ ಎಂದು ಜರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ