ತಂಡದ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, 'ಯಾರಿಗೂ ಅವಕಾಶ ಇಲ್ಲದಂತಾದೀತು ಎಂದು ನನಗನಿಸುವುದಿಲ್ಲ. ಇಲ್ಲಿ ಎಲ್ಲರಿಗೂ ಆಡುವ ಅವಕಾಶ ಇದೆ. ರಾಂಚಿ ಪಂದ್ಯದಲ್ಲಿ ಸುರೇಶ್ ರೈನಾ ಆಡುವುದಿಲ್ಲ, ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈವರೆಗೆ ಆಡದವರಿಗೆ ಇಲ್ಲಿ ಉತ್ತಮ ಅವಕಾಶವಿದೆ...' ಎಂದಿದ್ದಾರೆ.