ಬಿಬಿಕೆ9: ಮ್ಯಾಚ್ ಫಿಕ್ಸಿಂಗ್ ಎಂದ ಆರ್ಯವರ್ಧನ್ ಗುರೂಜಿ ಮೇಲೆ ಕಿಚ್ಚನ ರೋಷಾವೇಷ

ಭಾನುವಾರ, 16 ಅಕ್ಟೋಬರ್ 2022 (09:30 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನಲ್ಲಿ ಕಿಚ್ಚ ಸುದೀಪ್ ಅಪರೂಪಕ್ಕೆ ರೋಷಾವೇಷದಿಂದ ಮಾತನಾಡಿದ್ದು ಇದೆ. ಇಂದಿನ ಎಪಿಸೋಡ್‍ ನಲ್ಲಿ ಮತ್ತೆ ಕಿಚ್ಚನ ರೋಷಾವೇಷಕ್ಕೆ ಮನೆಯವರು, ವೀಕ್ಷಕರು ಸಾಕ್ಷಿಯಾಗಲಿದ್ದಾರೆ.

ಆರ್ಯವರ್ಧನ್ ಗುರೂಜಿ ಅನುಪಮಾ ಗೌಡ ವಿನ್ ಆಗಬೇಕು ಎಂಬುದು ಬಿಗ್ ಬಾಸ್ ಆಸೆ ಎನಿಸುತ್ತಿದೆ ಎಂದರು. ಈ ಮೂಲಕವಾಗಿ ಅನುಪಮಾ ಬಗ್ಗೆ ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ ಎಂದು ಪರೋಕ್ಷವಾಗಿ ಆರೋಪ ಮಾಡಿದರು. ಇದು ಕಿಚ್ಚನನನ್ನು ಕೆರಳಿಸಿದೆ.

‘ಅದೆಲ್ಲಾ ಮಾತಾಡ್ಬೇಡಿ ಸರ್! ಮಾತು ಮೇಲೆ ನಿಗಾ ಇರಲಿ! ಮ್ಯಾಚ್ ಫಿಕ್ಸಿಂಗ್ ಅಂದರೆ ಏನು? ಅಲ್ಲಿ ಕೂತವರಿಗೆ ಯಾರಿಗೂ ಯೋಗ್ಯತೆಯಿಲ್ವಾ? ಮೋಸ ಮಾಡ್ತಿದ್ದಾರಾ ಅವರು? ನಿಮ್ಮ ಬಗ್ಗೆ ಹೇಳಿದ್ರೆ ನೀವು ಇಷ್ಟುದ್ದ ಮಾತಾಡ್ತೀರಾ? ಈ ವೇದಿಕೆಗೆ ಮರ್ಯಾದೆ ತೆಗೆದ್ರೆ ಸತ್ಯವಾಗ್ಲೂ ಹೇಳ್ತೀನಿ ನನ್ಗೂ ನಿಮ್ಗೂ ಬೀಳುತ್ತೆ’ ಎಂದು ಸುದೀಪ್ ರೋಷಾವೇಷದಿಂದ ಹೇಳಿದರು. ಕಿಚ್ಚನ ರೋಷಾವೇಷಕ್ಕೆ ಅಲ್ಲಿದ್ದವರು ದಂಗಾಗುತ್ತಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ