ಬಿಗ್ ಬಾಸ್ ಕನ್ನಡ: ಸಮೀರ್ ಆಚಾರ್ಯ, ನಿವೇದಿತಾಗೆ ಮನೆಯೊಳಗಿರುವ ಅರ್ಹತೆಯೇ ಇಲ್ಲ ಎಂದ್ರು ಕೃಷಿ!

ಸೋಮವಾರ, 8 ಜನವರಿ 2018 (09:31 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಎಲಿಮಿನೇಟ್ ಆದ ಸ್ಪರ್ಧಿ ಕೃಷಿ ತಾಪಂಡ, ಸಮೀರ್ ಆಚಾರ್ಯ, ನಿವೇದಿತಾ ಗೌಡ ಮತ್ತು ರಿಯಾಜ್ ಗೆ ಮನೆಯೊಳಗಿರುವ ಅರ್ಹತೆಯೇ ಇಲ್ಲ  ಎಂದು ಕಿಚ್ಚ ಸುದೀಪ್ ಬಳಿ ಹೇಳಿಕೊಂಡಿದ್ದಾರೆ.
 

ಕಿಚ್ಚ ಸುದೀಪ್ ಜತೆ ವೇದಿಕೆ ಮೇಲೆ ಕೃಷಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಯಾರು ಮನೆಯೊಳಗೆ ಇರಲು ಯಾರಿಗೆ ಅರ್ಹತೆ ಇಲ್ಲ? ಯಾರು ಹೆಚ್ಚು ಅರ್ಹತೆ ಇದೆ ಎಂದು ನಿಮಗನಿಸುತ್ತೆ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.

ಸಮೀರ್ ಆಚಾರ್ಯ ತುಂಬಾ ಸುಳ್ಳು ಹೇಳ್ತಾರೆ, ನಿವೇದಿತಾಗೆ ಏನು ಅರ್ಹತೆ ಇದೆ ಎಂದೇ ಗೊತ್ತಾಗ್ತಿಲ್ಲ. ಇನ್ನು ರಿಯಾಜ್ ಬರೀ ನಾಟಕ ಮಾಡ್ತಾರೆ ಎಂದು ಕೃಷಿ ಹೇಳಿಕೊಂಡಿದ್ದಾರೆ. ಉಳಿದೆಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗಿರಲು ಅರ್ಹರು ಎಂದಿದ್ದಾರೆ ಕೃಷಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ