ಸಿಹಿಕಹಿ ಚಂದ್ರು ವಿರುದ್ಧ ಪ್ರತಿಭಟನೆ: ಈ ವಾರ ಮನೆಯಿಂದ ಚಂದ್ರು ಔಟ್…?

ಶುಕ್ರವಾರ, 3 ನವೆಂಬರ್ 2017 (14:51 IST)
ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ಸಿಹಿಕಹಿ ಚಂದ್ರು ವಿರುದ್ಧ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಪ್ರತಿಭಟನೆ ನಡೆಸಿದೆ.

ಬಿಗ್ ಬಾಸ್ ಕಳೆದ ವಾರ ಒಂದು ಮೊಟ್ಟೆಯ ಕಥೆ ಟಾಸ್ಕ್ ನೀಡಿದ್ದರು. ಈ ಸಂದರ್ಭದಲ್ಲಿ ಆಟವಾಡುವಾಗ ಸಿಹಿಕಹಿ ಚಂದ್ರು ಸಹ ಸ್ಪರ್ಧಿ ದಿವಾಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಸಿದ್ದರು. ಅಲ್ಲದೆ ಈ ಬಗ್ಗೆ ಪ್ರತ್ಯೇಕವಾಗಿ ಕ್ಷಮಾಪಣೆ ಕೂಡ ಕೇಳಿದ್ದರು. ಹೀಗಾಗಿ ಭೋವಿ ಯುವ ವೇದಿಕೆ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿರುವ ಇನ್ನೋವೇಟಿವ್ ಫಿಲ್ಮ್ ಸಿಟಿ ಸೆಟ್ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಕೂಡಲೇ ಸಿಹಿಕಹಿ ಚಂದ್ರು ಕೂಡಲೇ ಕ್ಷಮೆ ಕೇಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಅಲ್ಲದೆ ಈ ಕೂಡಲೇ ಚಂದ್ರು ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಬೇಕು ಎಂದು ಒತ್ತಾಯಿಸಿದ್ದರು. ಹೀಗಾಗಿ ಈ ಬಾರಿ ಚಂದ್ರು ಮನೆಯಿಂದ ಹೊರಬರ್ತಾರ ಅಥವಾ ಯಾರು ಹೊರಗೆ ಬರುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ