ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಹೊರಬಂದ ಧನುಶ್ರೀ

ಸೋಮವಾರ, 8 ಮಾರ್ಚ್ 2021 (09:00 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಮೊದಲ ವಾರವೇ ನಾಮಿನೇಟ್ ಆಗಿ ಕಡಿಮೆ ವೋಟ್ ಪಡೆದು ದೊಡ್ಮನೆಯಿಂದ ಹೊರಬಂದಿರುವ ಸ್ಪರ್ಧಿ ಧನುಶ್ರೀ.


ನಿನ್ನೆ ಕಿಚ್ಚ ಸುದೀಪ್ ಮನೆಯವರ ಜೊತೆಗೆ ಸಂವಾದ ನಡೆಸಿದ ಬಳಿಕ ಕೊನೆಯಲ್ಲಿ ಈ ವಾರ ಹೊರಬರುತ್ತಿರುವ ಸ್ಪರ್ಧಿ ಯಾರು ಎಂದು ಘೋಷಿಸಿದ್ದಾರೆ. ಇನ್ನು, ಮೊದಲ ವಾರವೇ ಹೊರಬರುತ್ತಿರುವ ನಿರಾಸೆಯಲ್ಲಿ ಧನುಶ್ರೀ ಕಣ್ಣೀರು ಹಾಕಿದರು.

ಆದರೆ ಒಂದೇ ವಾರದಲ್ಲಿ ಅವರು ಟ್ರೋಲ್ ಪೇಜ್ ಗಳ ಸ್ಟಾರ್ ಆಗಿದ್ದರು. ಮೇಕಪ್ ವಿಚಾರಕ್ಕೆ, ಶುಭಾ ಪೂಂಜಾಗೆ ಫಿಯಾನ್ಸಿ ಎಂದರೆ ಯಾರು ಎಂದು ಕೇಳಿದ್ದಕ್ಕಾಗಿ ಅವರು ಸಾಕಷ್ಟು ಟ್ರೋಲ್ ಗೊಳಗಾಗಿ ಸುದ್ದಿಯಲ್ಲಿದ್ದರು.

ಇನ್ನು, ಈ ವಾರದ ಕಿಚ್ಚನ ಚಪ್ಪಾಳೆ ಹಿರಿಯ ನಟ ಶಂಕರ್ ಅಶ್ವತ್ಥ್ ಪಾಲಾಗಿದೆ. ಹಿರಿಯನಾಗಿದ್ದರೂ ಕಿರಿಯರ ಜೊತೆಗೆ ಕಿರಿಯನಂತೆ, ಹಿರಿಯರ ಜೊತೆಗೆ ಹಿರಿಯನಂತೆ ಹೊಂದಿಕೊಂಡು ಹೋಗಿರುವ ಶಂಕರ್ ಅಶ್ವತ್ಥ್ ಗೆ ಕಿಚ್ಚ ಮೆಚ್ಚುಗೆಯ ಚಪ್ಪಾಳೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ