ಕೆ.ಆರ್. ಪುರಂನಲ್ಲಿ ಟ್ರಾಫಿಕ್ ಜಾಮ್! ಕಾರಣ ಏನು ಗೊತ್ತಾ?!

ಸೋಮವಾರ, 27 ಮಾರ್ಚ್ 2017 (10:30 IST)
ಬೆಂಗಳೂರು:  ಕೆ.ಆರ್. ಪುರಂನಲ್ಲಿ ತೂಗು ಸೇತುವೆಯಲ್ಲಿ ಇಂದು ಬೆಳಿಗ್ಗೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.

 

ಕಾರಣ ಕನ್ನಡ ಧಾರವಾಹಿಯೊಂದರ ಚಿತ್ರೀಕರಣ. ಅನುಮತಿಯಿಲ್ಲದೇ ತೂಗುಸೇತುವೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದ ತಂಡದಿಂದಾಗಿ ಸುಮಾರು 2 ಗಂಟೆ ಕಾಲ ಟ್ರಾಫಿಕ್ ಸಮಸ್ಯೆಯುಂಟಾಯಿತು.  ವಿದ್ಯಾರ್ಥಿಗಳು ಪರದಾಡುವಂತಾಯಿತು.

 
ಅನುಮತಿಯಿಲ್ಲದೇ ಯಾವುದೇ ಮುನ್ನೆಚ್ಚರಿಕೆಯೂ ಇಲ್ಲದೇ ಚಿತ್ರೀಕರಣ ನಡೆಸುತ್ತಿದ್ದರಿಂದ ಸ್ಥಳಕ್ಕೆ ಪೊಲೀಸರು ಆಗಮಿಸುವಷ್ಟರಲ್ಲಿ ಧಾರವಾಹಿ ತಂಡ ಪ್ಯಾಕಪ್ ಮಾಡಿಕೊಂಡು ಸ್ಥಳದಿಂದ ನಿರ್ಗಮಿಸಿತ್ತು.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ