ಮತ್ತೆ ಜನಪ್ರಿಯ ಶೋ ಮೂಲಕ ಕಿರುತೆರೆಗೆ ಮರಳಲಿದ್ದಾರೆ ಸಿಹಿ ಕಹಿ ಚಂದ್ರು

ಮಂಗಳವಾರ, 29 ಸೆಪ್ಟಂಬರ್ 2020 (11:48 IST)
ಬೆಂಗಳೂರು: ಸಿಹಿ ಕಹಿ ಚಂದ್ರು ಎಂದ ತಕ್ಷಣ ನೆನಪಾಗುವುದು ಅಡುಗೆ ಕಾರ್ಯಕ್ರಮಗಳು. ಈಗ ಹಿರಿಯ ನಟ ಮತ್ತೆ ಅಡುಗೆ ಕಾರ್ಯಕ್ರಮದೊಂದಿಗೆ ಕಿರುತೆರೆಗೆ ಮರಳುತ್ತಿದ್ದಾರೆ.


‘ಬೊಂಬಾಟ್ ಭೋಜನ’ ಎನ್ನುವ ಕಾರ್ಯಕ್ರಮದ ಮೂಲಕ ಸಿಹಿ ಕಹಿ ಚಂದ್ರು ಅಡುಗೆ ಕಾರ್ಯಕ್ರಮ ಜನಪ್ರಿಯವಾಗಿತ್ತು. ಈಗ ಮತ್ತೆ ಅದೇ ಕಾರ್ಯಕ್ರಮವನ್ನು ಸುವರ್ಣ ವಾಹಿನಿಯಲ್ಲಿ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಸದ್ಯದಲ್ಲೇ ಆರಂಭವಾಗಲಿದೆ. ಈಗಾಗಲೇ ಕಲರ್ಸ್ ವಾಹಿನಿಯ ಧಾರವಾಹಿಯೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ನಟನೆಯಷ್ಟೇ ಅವರ ಅಡುಗೆ ಕಾರ್ಯಕ್ರಮಗಳೂ ವೀಕ್ಷಕರಿಗೆ ಅಚ್ಚುಮೆಚ್ಚು. ಹೀಗಾಗಿ ಅವರು ಮತ್ತೆ ಅಡುಗೆ ಶೋ ನಡೆಸಿಕೊಡಲಿರುವ ಸುದ್ದಿ ವೀಕ್ಷಕರಿಗೆ ಖುಷಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ