ರಾಹುಲ್ ದ್ರಾವಿಡ್ ಆಯ್ತು, ಇದೀಗ ಅನಿಲ್ ಕುಂಬ್ಳೆಗಾಗಿ ಅಭಿಮಾನಿಗಳ ಅಭಿಯಾನ

ಗುರುವಾರ, 2 ಮೇ 2019 (08:47 IST)
ಬೆಂಗಳೂರು: ರಾಹುಲ್ ದ್ರಾವಿಡ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರುವಂತಾಗಲು ಜೀ ಕನ್ನಡ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿತ್ತು. ಇದೀಗ ಅನಿಲ್ ಕುಂಬ್ಳೆಗಾಗಿ ಅಭಿಯಾನ ಆರಂಭಿಸಿದೆ.


ಈ ಇಬ್ಬರೂ ಮಹಾನ್ ಕನ್ನಡಿಗ ಕ್ರಿಕೆಟಿಗರನ್ನು ಸಾಧಕರ ಸೀಟ್ ನಲ್ಲಿ ಕೂರಿಸಲು ಸತತ ಪ್ರಯತ್ನ ಮಾಡಿ ಸೋತ ಜೀ ಕನ್ನಡ ಈಗ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜತೆ ಸೇರಿಕೊಂಡು ಅಭಿಯಾನವನ್ನೇ ಆರಂಭಿಸಿದೆ.

#WeekendWithKumble ಎಂಬ ಹ್ಯಾಶ್ ಟ್ಯಾಗ್ ನ್ನು ತಮ್ಮ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿ ಅದು ಕುಂಬ್ಳೆಗೆ ತಲುಪುವವರೆಗೂ ಶೇರ್ ಮಾಡಿ ಎಂದು ಜೀ ಕನ್ನಡ ಮನವಿ ಮಾಡಿದೆ. ಇದಕ್ಕೆ ಅಭಿಮಾನಿಗಳೂ ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ