ಸಿಎಂ ಯಡಿಯೂರಪ್ಪ ಇಂದು ಮಾಡಲಿರುವ ಒಂದು ಆದೇಶದ ಮೇಲೆ ಸಾವಿರಾರು ಜನರ ಭವಿಷ್ಯವಿದೆ!
ಪಕ್ಕದ ರಾಜ್ಯಗಳಲ್ಲಿ ಕೊರೋನಾ ಪರಿಸ್ಥಿತಿ ನೋಡಿದರೆ ಅಂತರಾಜ್ಯ ಬಸ್ ಸಂಚಾರಕ್ಕೆ ಅನುಮತಿ ಸಿಗುವುದು ಕಷ್ಟ. ಆದರೆ ರಾಜ್ಯದೊಳಗೇ ಬಸ್ ಸಂಚರಿಸಲು ಷರತ್ತುಬದ್ಧ ಒಪ್ಪಿಗೆ ನೀಡುವ ಸಾಧ್ಯತೆಯಿದೆ. ಇದರಿಂದ ಹಲವು ಕಾರ್ಮಿಕರಿಗೆ, ನೌಕರರಿಗೆ ತಮ್ಮ ಕೆಲಸಗಳಿಗೆ ಹೋಗಲು ಅನುಕೂಲವಾಗಲಿದೆ. ಹೀಗಾಗಿ ಸಿಎಂ ಇಂದು ಕೈಗೊಳ್ಳುವ ನಿರ್ಧಾರದ ಮೇಲೆ ಹಲವರ ಭವಿಷ್ಯ ಅಡಕವಾಗಿದೆ ಎನ್ನಬಹುದು.