ಅತೃಪ್ತ ಎಂಬಿ ಪಾಟೀಲ್ ರನ್ನು ಬಿಜೆಪಿ ಸಂಪರ್ಕಿಸಿದೆಯೇ?

ಸೋಮವಾರ, 11 ಜೂನ್ 2018 (09:11 IST)
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕ ಎಂಬಿ ಪಾಟೀಲ್ ರನ್ನು ಬಿಜೆಪಿ ಸಂಪರ್ಕಿಸಿದೆಯೇ?

ಈ ಬಗ್ಗೆ ಎಂಬಿ ಪಾಟೀಲ್ ರನ್ನು ಪ್ರಶ್ನಿಸಿದರೆ ಅಸಮಾಧಾನವಿರುವುದು ನಿಜ. ಆದರೆ ಇದುವರೆಗೆ ಯಾರೂ ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿಲ್ಲ ಎಂದಿದ್ದಾರೆ. ಅತೃಪ್ತ ಶಾಸಕರು ಬಿಜೆಪಿ ಸೇರ್ಪಡೆಗೆ ಚಿಂತನೆ ನಡೆಸುತ್ತಿದ್ದಾರೆ ಎಂಬ ವದಂತಿಗಳ ಹಿನ್ನಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಆದರೆ ನಿನ್ನೆ ರಾಯಚೂರು ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್ ಎಂಬಿ ಪಾಟೀಲ್ ರನ್ನು ಭೇಟಿ ಮಾಡಿದ್ದು ತೀವ್ರ ಕುತೂಹಲ ಕೆರಳಿಸಿದೆ. ಆದರೆ ಈ ಸಂದರ್ಭದಲ್ಲಿ ರಾಜಕೀಯ ಚರ್ಚೆ ನಡೆದಿಲ್ಲ. ಸಂಬಂಧಿಕರಾದ ಕಾರಣ ಕೌಟುಂಬಿಕ ವಿಚಾರಕ್ಕೆ ಭೇಟಿಯಾಗಿದ್ದೆವು ಎಂದು ಶಾಸಕ ಶಿವರಾಜ್ ಸಮಜಾಯಿಷಿ ನೀಡಿದ್ದಾರೆ. ಅಂತೂ ಅತೃಪ್ತರ ನಡೆ ಎಲ್ಲಿಯವರೆಗೆ ಮುಟ್ಟುತ್ತದೆ ಎನ್ನುವುದನ್ನು ಜನರೂ ಕುತೂಹಲದಿಂದ ನೋಡುವಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ