ಜೈಲಿನಿಂದ ಹೊರ ಬಂದ ಕೂಡಲೇ ಮೊದಲ ಪತ್ನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದುನಿಯಾ ವಿಜಿ

ಮಂಗಳವಾರ, 2 ಅಕ್ಟೋಬರ್ 2018 (07:08 IST)
ಬೆಂಗಳೂರು: ಜೈಲಿನಿಂದ ಹೊರಬಂದಿರುವ ನಟ ದುನಿಯಾ ವಿಜಯ್ ಬಂದ ತಕ್ಷಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಮೊದಲ ಪತ್ನಿಯ ವಿರುದ‍್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ನಡೆದಾಗ ಮೊದಲ ಪತ್ನಿ ನಾಗರತ್ನ ತಮ್ಮ ಮನೆಗೆ ಬಂದು ಎರಡನೇ ಪತ್ನಿ ಕೀರ್ತಿ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ಆಕೆ ಬಾಯಿಬಿಟ್ಟರೆ ಬರೀ ಸುಳ್ಳು. ನಾವು ಯಾರೂ ಆಕೆ ವಿರುದ್ಧ ಹಲ್ಲೆ ನಡೆಸಿಲ್ಲ ಎಂದಿದ್ದಾರೆ. ಈ ಸಂದರ್ಭದಲ್ಲಿ ಜತೆಯಿದ್ದ ಎರಡನೇ ಪತ್ನಿ ಕೀರ್ತಿ ಕೂಡಾ ನಾನು ಆಕೆಯನ್ನು ಟಚ್ ಕೂಡಾ ಮಾಡಿಲ್ಲ. ಬೇಕಿದ್ದರೆ ಸಿಸಿಟಿವಿ ಫೂಟೇಜ್ ಇದೆ. ಆಕೆ ಬಂದು ಗಲಾಟೆ ಮಾಡಿ ಹೋದರು. ನಾವು ಯಾರೂ ಆಕೆಗೆ ಏನೂ ಮಾಡಿಲ್ಲ ಎಂದಿದ್ದಾರೆ. ಈ ನಡುವೆ ತಮ್ಮ ಮೇಲೆ ಬಂದ ಆರೋಪಗಳಿಗೆ ಕಾನೂನು ಮೂಲಕವಾಗಿಯೇ ಉತ್ತರಿಸುವುದಾಗಿ ದುನಿಯಾ ವಿಜಯ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ