ಮೊದಲ ಪತ್ನಿಯಿಂದ ಎರಡನೇ ಪತ್ನಿಯನ್ನು ಕಾಪಾಡಿ ಎಂದು ದುನಿಯಾ ವಿಜಯ್ ಮೊರೆ!

ಸೋಮವಾರ, 1 ಅಕ್ಟೋಬರ್ 2018 (09:23 IST)
ಬೆಂಗಳೂರು: ಮಾರುತಿ ಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಯ್ ಇದೀಗ ದ್ವಿತೀಯ ಪತ್ನಿಗೆ ಭದ್ರತೆ ಕೋರಿದ್ದಾರೆ.

ದ್ವಿತೀಯ ಪತ್ನಿ ಕೀರ್ತಿಗೆ ಮೊದಲ ಪತ್ನಿ ನಾಗರತ್ನ ಕಿರುಕುಳ ನೀಡಿರುವ ಆರೋಪ ಹೊರಿಸಿರುವ ವಿಜಯ್ ಸೂಕ್ತ ಭದ್ರತೆ ಕೊಡುವಂತೆ ಆಗ್ರಹಿಸಿದ್ದಾರೆ.

ಹಲ್ಲೆ ಪ್ರಕರಣದ ಸಂದರ್ಭದಲ್ಲಿ ಕೀರ್ತಿ ಮೇಲೆ ನಾಗರತ್ನ ಹಲ್ಲೆ ನಡೆಸಿದ್ದು, ಕೀರ್ತಿ ಕಾರು ಚಾಲಕ ಮಹಮ್ಮದ್ ಗೆ ಕರೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗೇ ಮುಂದುವರಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಕೀರ್ತಿ ಹೇಳಿದ್ದಾರೆ. ಹೀಗಾಗಿ ಅವರಿಗೆ ಭದ್ರತೆ ಕೊಡಿ ಎಂದು ವಿಜಯ್ ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ