ಸಚಿವ ಸಂಪುಟ ವಿಸ್ತರಣೆಯ ಹಿನ್ನಲೆ; ಮತ್ತೆ ಸಿಎಂ ಅನ್ನು ಭೇಟಿಯಾದ ಉಮೇಶ್ ಕತ್ತಿ

ಶುಕ್ರವಾರ, 20 ನವೆಂಬರ್ 2020 (11:26 IST)
ಬೆಂಗಳೂರು : ಸಚಿವ ಸಂಪುಟ ವಿಸ್ತರಣೆಯ ಹಿನ್ನಲೆಯಲ್ಲಿ ಬಿಜೆಪಿ ನಾಯಕ ಉಮೇಶ್ ಮತ್ತೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ.

ಉಮೆಶ್ ಕತ್ತಿ  ಅವರು ಸಚಿವ ಸ್ಥಾನಕ್ಕಾಗಿ  ಲಾಬಿ ನಡೆಸುತ್ತಿದ್ದು, ಈಗಾಗಲೇ ಹಲವು ಬಾರಿ ಸಿಎಂ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಕೇಳಿಕೊಂಡಿದ್ದರು.

ಇದೀಗ ರಾಜ್ಯ ಸರ್ಕಾರದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸಿಎಂ ಕಾವೇರಿ ನಿವಾಸಕ್ಕೆ ಉಮೇಶ್ ಕತ್ತಿ  ಮತ್ತೆ ಭೇಟಿ ನೀಡಿದ್ದು, ಸಿಎಂ ಜೊತೆ ಕೆಲವು ಗಂಟೆಗಳ ಕಾಲ ಚರ್ಚಿಸಿ ತೆರಳಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ