ದೂರು ನೀಡಲು ಎಸ್ ಪಿ ಕಚೇರಿಗೆ ಬಂದ ಶಾಸಕ ದೇವಾನಂದ್ ಚವ್ಹಾಣ್ ಫುಲ್ ಗರಂ

ಶುಕ್ರವಾರ, 20 ನವೆಂಬರ್ 2020 (11:22 IST)
ಬೆಂಗಳೂರು : ಶಾಸಕ ದೇವಾನಂದ್ ಚವ್ಹಾಣ್ ಹತ್ಯೆಗೆ ಸಂಚು ಆರೋಪ ದೂರು ನೀಡಲು ಎಸ್ ಪಿ ಕಚೇರಿಗೆ ಬಂದ  ಶಾಸಕರು ದೇವಾನಂದ್  ಎಸ್ ಪಿ ಅಗರ್ವಾಲ್. ಮೇಲೆ ಗರಂ ಆಗಿದ್ದಾರೆ.

ನಾಗಠಾಣಾ ಎಂಎಲ್ ಎ ದೇವಾನಂದ್ ಚವ್ಹಾಣ್  ಅವರು ದೂರು ನೀಡಲು ಎಸ್ ಪಿ ಕಚೇರಿಗೆ ಶಾಸಕರ ಭೇಟಿ ನೀಡಿದ್ದಾರೆ, ಆ ವೇಳೆ ಎಸ್.ಪಿ ಕೈಗೆ ಸಿಗದ ಕಾರಣ ಶಾಸಕರು ಗರಂ ಆಗಿದ್ದಾರೆ.

ಭೀಮಾತೀರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದಾರೆ. ದೂರು ನೀಡಲು ಬಂದ ಎಸ್.ಪಿ ಕೈಗೆ ಸಿಗುತ್ತಿಲ್ಲ. ನನ್ನ ಹತ್ಯೆ ಸಂಚಿನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದರೂ ಪೊಲೀಸರು ಸ್ಪಂದಿಸುತ್ತಿಲ್ಲ. ಶಾಸಕರಿಗೆ ಹೀಗೆ ಆದ್ರೆ ಸಾಮಾನ್ಯ ಜನರ ಗತಿಯೇನು? ಎಂದು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ