ಕನಕಪೂರದಲ್ಲಿ ಕಂಪಿಸಿದ ಭೂಮಿ

ಭಾನುವಾರ, 20 ಏಪ್ರಿಲ್ 2014 (11:08 IST)
PR
ಇಂದು ಬೆಳ್ಳಿಗ್ಗೆ ಕನಕಪುರ ತಾಲೂಕಿನಲ್ಲಿ ಭೂಮಿ ಕಂಪಿಸಿದೆ. ರಾಮನಗರ ಜಿಲ್ಲೆಯ ಕನಕಪುರದ ತಾಲೂಕಿನಲ್ಲಿ ಮನೆಯ ಗೋಡೆಗಳು ಕೂಡ ಬಿರುಕು ಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಇಂದು ಬೆಳಿಗ್ಗೆ 7 ರಿಂದ 8 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು , ಜನರು ಬಹಳಷ್ಟು ಆತಂಕಕ್ಕೋಳಗಾಗಿದ್ದಾರೆ. ಭೂಕಂಪ ಆದ ನಂತರ ಜನರೆಲ್ಲ ಮನೆಯಿಂದ ಹೊರಗಡೆ ಬಂದರು ಮತ್ತು ಇವರ ಮುಖದಲ್ಲಿ ಭಯ ತುಂಬಿತ್ತು.

ಮನೆಗಳಿಗೆ ಬಿರುಕು ಬಿಟ್ಟ ಕಾರಣ ಕೆರಲಾಳುಸಂದ್ರ ಮತ್ತು ಹೆಗ್ಗನೂರಿನಲ್ಲಿನ ಜನರು ಆತಂಕಕ್ಕೀಡಾಗಿದ್ದಾರೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.

ವೆಬ್ದುನಿಯಾವನ್ನು ಓದಿ