ಭಾರತೀಯ ಕ್ರಿಕೆಟಿಗರನ್ನು ಓಲೈಸಲು ಪ್ರಿಯಾಂಕ ಶೋ ವಿಫಲ!

ಸೋಮವಾರ, 17 ಮೇ 2010 (16:10 IST)
IFM
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರ ನೂತನ 'ಖತ್ರೋನ್ ಕಿ ಕಿಲಾಡಿ'ಯೆಂಬ ನೂತನ ಟಿ.ವಿ ಶೋ ಆರಂಭದಲ್ಲಿಯೇ ಹಿನ್ನಡೆ ಅನುಭವಿಸುವಂತಾಗಿದೆ.

ಮೂಲಗಳ ಪ್ರಕಾರ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರತದ ಸಹಿತ ವಿದೇಶಿ ಕ್ರಿಕೆಟಿಗರು ಸಹಿ ಹಾಕಿದ್ದರು. ಆದರೆ ಲಲಿತ್ ಮೋದಿಯ ಐಪಿಎಲ್ ರಾದ್ದಾಂತ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿಯವರ ವಿವಾದತ್ಮಾಕ ಹೇಳಿಕೆಯಿಂದ ಶೋ ಹಿನ್ನಡೆ ಅನುಭವಿಸುವಂತಾಗಿದೆ.

ಖತ್ರೊನ್ ಕಿ ಕಿಲಾಡಿ ಮೂರನೇ ಭಾಗವನ್ನು ಪ್ರಿಯಾಂಕ ನಿರ್ವಹಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಮೊದಲೆರಡು ಆವೃತ್ತಿಗಳಲ್ಲಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಿರ್ವಾಹಕರಾಗಿದ್ದರು. ಅಲ್ಲದೆ ಶೋ ಭಾರೀ ಯಶಸ್ಸು ಕಂಡಿತ್ತು.

ಆದರೆ ಮೂರನೇ ಆವೃತ್ತಿಗೆ ಪ್ರಸಕ್ತ ಸಾಗುತ್ತಿರುವ ಐಪಿಎಲ್ ವಿವಾದ ತೊಡಕಾಗಿ ಪರಿಣಮಿಸಿದೆ. ಅಲ್ಲದೆ ಐಪಿಎಲ್ ಪಾರ್ಟಿ ಹಾಗೂ ಧೀರ್ಘ ಪ್ರಯಾಣವು ಆಟಗಾರರಿಗೆ ದಣಿವನ್ನುಂಟು ಮಾಡುತ್ತಿದೆಯೆಂಬ ನಾಯಕ ಧೋನಿ ಹೇಳಿಕೆಯು ಕಾರ್ಯಕ್ರಮಕ್ಕೆ ಹಿನ್ನಡೆಯನ್ನುಂಟು ಮಾಡಿದೆ.

ಮೂಲಗಳ ಪ್ರಕಾರ ಕ್ರಿಕೆಟಿಗರ ಜತೆಗಿನ ದಿನಾಂಕವನ್ನು ಇದುವರೆಗೆ ಅಂತಿಮಗೊಳಿಸಲಾಗಿಲ್ಲ. ಈ ಬಗ್ಗೆ ಮಾತುಕತೆಯು ಪ್ರಗತಿಯಲ್ಲಿದೆ. ಎರಡು ತಿಂಗಳ ಹಿಂದೆಯೇ ಈ ಬಗ್ಗೆ ಪ್ರಕಟಣೆ ಬಂದಿತ್ತಾದರೂ ನೂತನ ವಿವಾದದಿಂದಾಗಿ ಮಂದಗತಿಯಲ್ಲಿ ಸಾಗುತ್ತಿದೆ.

ಈ ಹಿಂದೆ 16 ಎಪಿಸೋಡ್‌ಗಳ ಶೋ ಜುಲೈ 16 ರಂದು ಕೊನೆಗೊಳಲಿದೆ ಎಂದು ಹೇಳಲಾಗಿತ್ತು. ಶೋನಲ್ಲಿ ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಆಡಂ ಗಿಲ್‌ಕ್ರಿಸ್ಟ್ ಮತ್ತು ಬ್ರೆಟ್ ಲೀರಂತಹ ಆಟಗಾರರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವೆಬ್ದುನಿಯಾವನ್ನು ಓದಿ